ಪುತ್ತೂರು: ನೃತ್ಯಾಂತರಂಗ 113ನೇ ಸರಣಿಯಲ್ಲಿ ಕೂಚಿಪುಡಿ ನೃತ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 113ನೇ ಸರಣಿಯಲ್ಲಿ ಜು.9ರಂದು ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆದ ಕೂಚಿಪುಡಿ ನೃತ್ಯ ವಿಶೇಷ ಕಾರ್ಯಕ್ರಮವಾಗಿ ಮೂಡಿ ಬಂತು.

ಬೆಂಗಳೂರಿನ ಖ್ಯಾತ ಗುರು ವೈಜಯಂತಿ ಕಾಶಿಯವರ ಶಿಷ್ಯೆ ಅಶ್ವಿನಿ ಭಟ್ ಇವರಿಂದ ಕೂಚಿಪುಡಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ನಿವೃತ್ತ ಉಪನ್ಯಾಸಕ ಪ್ರೊ. ದತ್ತಾತ್ರೇಯ ರಾವ್ ಅಭ್ಯಾಗತರಾಗಿ ಆಗಮಿಸಿ ಶುಭ ಕೋರಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಕು ವಿಂಧ್ಯಾ ಕಾರಂತ, ಸೃಷ್ಟಿ, ಸಾನ್ವಿ ಆನಂದ್, ಅಕ್ಷರಿ, ಶೌರಿ ಕೃಷ್ಣ, ಅಪೂರ್ವಗೌರಿ ದೇವಸ್ಯ ಕಾರ್ಯಕ್ರಮ ನಿರ್ವಹಿಸಿದರು. ವಿದ್ವಾನ್ ಗುರು ದೀಪಕ್ ಕುಮಾರ್ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಂಡರು.

LEAVE A REPLY

Please enter your comment!
Please enter your name here