ಜುಲೈ 15 ರಂದು ಪುತ್ತೂರಿನಲ್ಲೂ ಪ್ರಾರಂಭಗೊಳ್ಳಲಿದೆ ದ.ಕ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ. ಇದರ 7 ನೆಯ ಶಾಖೆ

0

ಪುತ್ತೂರು : ಭಾರತ ಸರ್ಕಾರದ ಕಾಪೋರೇಟ್ ವ್ಯವಹಾರಗಳ ಸಚಿವಾಲಯ ಇದರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ,ಹೆಸರಾಂತ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ.
ಇದರ 7ನೇ ಶಾಖೆಯೂ ಪುತ್ತೂರಿನಲ್ಲೂ ಜುಲೈ 15 ರಿಂದ ಕಾರ್ಯನಿರ್ವಹಿಸಲಿದೆ.
ಬೊಳುವಾರು ಇನ್ ಲ್ಯಾಂಡ್ ಮಯೂರ ಕಮರ್ಷಿಯಲ್ ಸಂಕೀರ್ಣ ಇದರ ಮೂರನೆಯ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿರುವ ನೂತನ ಶಾಖೆಯನ್ನು ಪುತ್ತೂರಿನ ಶಾಸಕರಾದ
ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.


ಅಧ್ಯಕ್ಷತೆಯನ್ನು ದ.ಕ.ಮ್ಯೂಚುವಲ್ ಬೆನಿಫಿಟ್ ನಿಧಿ ಲಿ.ಇದರ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಥಾಪಕ ಸದಸ್ಯರೂ ಆಗಿರುವ ಆಲ್ವಿನ್ ಜೋಯಲ್ ನೊರೊನ್ಹಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ,ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ರೆ। ಡಾ| ಅಂತೋನಿ ಪ್ರಕಾಶ್ ಮೊಂತೇರೊ, ಝೋನಲ್ ಲೆಫ್ಟಿನೆಂಟ್ ಮೊಹಮ್ಮದ್ ರಫೀಕ್ ದರ್ಬೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ ಇವರುಗಳು ಭಾಗವಹಿಸಲಿದ್ದು , ಅತಿಥಿಗಳಾಗಿ ಮ್ಯೂಚುವಲ್ ಬೆನಿಫಿಟ್ ನಿಧಿ ಕಡಬ ಶಾಖೆ ಇದರ ಅಧ್ಯಕ್ಷ ಸತೀಶ್ ನಾಯಕ್ ಪಾಲ್ಗೊಳ್ಳಲಿದ್ದಾರೆಯೆಂದು ಪುತ್ತೂರು ಶಾಖೆಯ ಅಧ್ಯಕ್ಷರಾದ ಪುನೀತ್ ವಿ.ಜೆ. ಪ್ರಕಟಣೆ ತಿಳಿಸಿದ್ದಾರೆ.

ಸಂಸ್ಥೆಯ ಸೇವೆಗಳು :
ಉಳಿತಾಯ ಖಾತೆ , ಪಿಗ್ಮಿ , ಆರ್.ಡಿ , ಏಫ್.ಡಿ , ಮಾಸಿಕ ಆದಾಯ ಯೋಜನೆ ಸಹಿತ ಹಲವಾರು ಸೌಲಭ್ಯಗಳು ಸಂಸ್ಥೆಯಿಂದ ಲಭ್ಯವಿದ್ದು , ಉಳಿತಾಯ ಖಾತೆ ಮೇಲೆ ವಾರ್ಷಿಕ 7% ಬಡ್ಡಿ ದರ , ಹಾಗೂ ಏಫ್ .ಡಿ ಮೇಲೆ 10% ಬಡ್ಡಿದರ ಗ್ರಾಹಕರಿಗೆ ಸಿಗಲಿದ್ದು , ಹಿರಿಯ ನಾಗರಿಕರಿಗೆ 1% ಅಧಿಕ ಬಡ್ಡಿಯೂ ಸಿಗಲಿದೆ.

ಶುಭಾರಂಭದ ಕೊಡುಗೆ :
ಸಂಸ್ಥೆಯ ಶುಭಾರಂಭದ ಸಲುವಾಗಿ ಆಗಸ್ಟ್ 16 ರ ವರೆಗೆ ನಿಶ್ಚಿತ ಠೇವಣಿ (F.D) ಮೇಲೆ ವಾರ್ಷಿಕ 10.5% ಬಡ್ಡಿದರ ಹಾಗೂ 2 ವರ್ಷ ಮೇಲ್ಪಟ್ಟ ಠೇವಣಾತಿಗಳಿಗೆ 12% ಬಡ್ಡಿದರವನ್ನು ಸಂಸ್ಥೆ ನೀಡುವುದಾಗಿ ಘೋಷಣೆ ಮಾಡಿದೆ.

LEAVE A REPLY

Please enter your comment!
Please enter your name here