ನೆಲ್ಯಾಡಿ: ಕೂರತ್ ತಂಙಳ್ ಅನುಸ್ಮರಣಾ ಸಂಗಮ

0

ನೆಲ್ಯಾಡಿ: ಸುನ್ನೀ ಸಂಘ ಕುಟುಂಬಗಳಾದ ಕೆ.ಎಂ.ಜೆ, ಎಸ್.ವೈ.ಎಸ್.ಎಸ್.ಎಸ್.ಎಫ್ ಆಶ್ರಯದಲ್ಲಿ ಧಾರ್ಮಿಕ ವಿದ್ವಾಂಸ ನೆಲ್ಯಾಡಿ ಸಹಿತ ನೂರಾರು ಮಹಲ್‌ಗಳ ಖಾಝಿ ಖುರ್ರತ್ತುಸ್ಸಾದಾತ್ ಕೂರತ್ ತಂಙಳ್ ಅನುಸ್ಮರಣಾ ಸಂಗಮ ಹಾಗೂ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಕೂರತ್ತ್ ತಂಙಳ್‌ರ ಸುಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸೂದ್ ಅಲ್ ಬುಖಾರಿರವರ ನೇತೃತ್ವದಲ್ಲಿ ನೆಲ್ಯಾಡಿಯಲ್ಲಿ ನಡೆಯಿತು.


ಎಸ್.ವೈ.ಎಸ್ ಅಧ್ಯಕ್ಷರಾದ ಉಸ್ಮಾನ್ ಔಹರಿ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಅಲ್ ಮಸ್ಜಿದುಲ್ ಜಲಾಲಿಯಾ ಖತೀಬರಾದ ಬಹು ಮಲ್ಲಿ ಸಖಾಫಿ ಅನುಸ್ಮರಣಾ ಪ್ರಭಾಷಣ ಮಾಡಿದರು. ನೆಲ್ಯಾಡಿ ಎಸ್.ಎಸ್.ಎಫ್ ಅಧ್ಯಕ್ಷರಾದ ಬಹು ಅನ್ಸಿಫ್ ಸಅದಿ ಸ್ವಾಗತ ಭಾಷಣ ಮಾಡಿದರು. ನೆಲ್ಯಾಡಿ ಕೆ.ಎಂ.ಜೆ ಅಧ್ಯಕ್ಷರಾದ ಎನ್.ಎಸ್.ಸುಲೈಮಾನ್, ಕೌಕ್ರಾಡಿ ಗ್ರಾ.ಪಂ.ಸದಸ್ಯ ಹನೀಫ್ ಕರಾವಳಿ, ಎಸ್,ವೈ.ಎಸ್ ಮಾಜಿ ಅಧ್ಯಕ್ಷ, ಹಿರಿಯ ವಿದ್ವಾಸರಾದ ಹಸೈನಾರ್ ಮುಸ್ಲಿಯಾರ್, ಹಿರಿಯರಾದ ಎನ್.ಎಸ್.ಉಮ್ಮರ್, ಎಸ್.ವೈ.ಎಸ್ ನೆಲ್ಯಾಡಿ ಕಾರ್ಯದರ್ಶಿ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಬ್ಬಾರ್, ನೆಲ್ಯಾಡಿ ಪರಿಸರದ ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್, ಕೆಸಿಎಫ್, ಎಸ್‌ಬಿಎಸ್ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು. ಪವಿತ್ರ ಉಮ್ರಾ ಯಾತ್ರೆ ನಿರ್ವಹಿಸಲಿರುವ ಅಶ್ರಫ್ ಸಅದಿರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here