ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ, ಸ್ಟೂಡೆಂಟ್ ವಾಕಥಾನ್

0

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ, ಸ್ಟುಡೆಂಟ್ಸ್ ವಾಕಥಾನ್ ಕಾರ್ಯಕ್ರಮ ಜು.27ರಂದು ಪುತ್ತೂರಿನಲ್ಲಿ ನಡೆಯಿತು.

ಪುತ್ತೂರು ಓಲ್ಡ್ ಸುನ್ನೀ ಸೆಂಟರ್ ಕಛೇರಿಯಿಂದ ಪ್ರಾರಂಭಗೊಂಡ ಕಾಲ್ನಡಿಗೆ ಜಾಥಾ ಅಮರ್ ಜ್ಯೋತಿಯಲ್ಲಿ ಕೊನೆಗೊಂಡಿತು.

ಸಲಾಂ ಹನೀಫಿ ಕಬಕ ಪ್ರಾರ್ಥಿಸಿದರು. ಮಿತ್ತೂರಿನ ಕೆ.ಜಿ.ಎನ್ ದಅವಾ ವಿದ್ಯಾರ್ಥಿ ಸಾಲಿಂ ಮಾಚಾರ್ ಸಂದೇಶ ಭಾಷಣಗೈದರು. ಡಿವಿಷನ್ ನಾಯಕರಾದ ಶಾಕಿರ್ ಕೊಳ್ತಿಗೆ, ಮುಹ್ಸಿನ್ ಕಟ್ಟತ್ತಾರ್, ಸಿನಾನ್ ಸಅದಿ ಪಾಳ್ಯತಡ್ಕ, ರಫೀಕ್ ಕೆಮ್ಮಾಯಿ ಉಪಸ್ಥಿತರಿದ್ದರು.
ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ನವಾಝ್ ಕಬಕ ವಂದಿಸಿದರು. ಪುತ್ತೂರು ಡಿವಿಷನ್ ವ್ಯಾಪ್ತಿಯಲ ಕ್ಯಾಂಪಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here