ಕೊಡಂಬೆಟ್ಟು: ನೇಜಿದಪರ್ಬ- 2024

0

ವಿಟ್ಲ: ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ಪೆರಿಯಾವು ಗುತ್ತುವಿನಲ್ಲಿ ಶಿವಾಜಿ ಬಳಗ, ಶಿವಾಜಿ ಮಾತೃ ಸೇವಾ ಟ್ರಸ್ಟ್, ಹಾಗೂ ಶಿವಾಜಿ ಚಿಣ್ಣರ ಬಳಗ ಶ್ರೀ ರಾಮನಗರ ಮಧ್ವ ಇದರ ಸಂಯುಕ್ತ ಆಶ್ರಯದಲ್ಲಿ ನೇಜಿದಪರ್ಬ- 2024 ಕಾರ್ಯಕ್ರಮವು ಎರಡು ಎಕರೆ ಗದ್ದೆಯಲ್ಲಿ ನೂರಕ್ಕಿಂತಲೂ ಅಧಿಕ ಸದಸ್ಯರ ಸಮ್ಮುಖದಲ್ಲಿ ಕೇವಲ ಒಂದು ಗಂಟೆಯಲ್ಲಿ ಅತ್ಯಂತ ಯಶಸ್ವಿ ಪೂರ್ಣವಾಗಿ ನೇಜಿ ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೆರಿಯಾವು ಗುತ್ತುವಿನ ಹಿರಿಯರಾದ ಗಂಗಾಧರ ಗಟ್ಟಿ, ಗುತ್ತುವಿನ ಯಜಮಾನರಾದ ರಮೇಶ್ ಗಟ್ಟಿ ,ನವೀನ್ ಚಂದ್ರಗಟ್ಟಿ, ಮದ್ವ ಅಯ್ಯಪ್ಪ ಮಂದಿರದ ಅರ್ಚಕರಾದ ರಮೇಶ ಆಚಾರ್ಯ, ಶಿವಾಜಿ ಬಳಗದ ಗೌರವಾಧ್ಯಕ್ಷರು ಪ್ರಕಾಶ್ ಮದ್ವ, ಅಧ್ಯಕ್ಷರಾದ ಶ್ರೀರಾಜ್ ಆಚಾರ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಬಿಲ್ಲವ ಸೇವಾ ಸಂಘ ವಗ್ಗ ಇದರ ಪದಾದಿಕಾರಿಗಳು ಸೇರಿದಂತೆ ಗ್ರಾಮಸ್ಥರು ಸಹಕರಿಸಿದರು.

LEAVE A REPLY

Please enter your comment!
Please enter your name here