ಜು.31: ಕೆ.ಎಸ್‌ ಆರ್‌ ಟಿ.ಸಿ ಚಾಲಕ ಕೊಯಿಲ ಕಾಳಪ್ಪ ಸೇವಾ ನಿವೃತ್ತಿ

0

ಪುತ್ತೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಕೊಯಿಲ ಗ್ರಾಮದ ಪೆರ್ಲ ಬರಮೇಲ್ ನಿವಾಸಿ ಕಾಳಪ್ಪ ರವರು ಜುಲೈ 31 ರಂದು ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದಾರೆ.

1992 ರಿಂದ 2024 ರ 32 ವರ್ಷಗಳ ಕಾಲ ಸೇವೆ ಸಲ್ಲಿಸಿದರು .ಇವರು1992 ರಿಂದ 2009 ರವರೆಗೆ 17 ವರ್ಷಗಳ ಕಾಲ ಕುಂದಾಪುರ ವಿಭಾಗದಲ್ಲಿ ಹಾಗೂ 2009 ರಿಂದ 2018 ರ ವರೆಗೆ ಮಂಗಳೂರು ಘಟಕ ಮಂಗಳೂರು ವಿಭಾಗ -2 ರಲ್ಲಿ ಕಾರ್ಯ ನಿರ್ವಹಿಸಿದರು.2019 ಫೆ.15ರಿಂದ ನವೆ.22 -2019 ರ ವರೆಗೆ ಮೈಸೂರು ವಿಭಾಗ ಘಟಕ -2 ರಲ್ಲಿ ಕಾರ್ಯ ನಿರ್ವಹಿಸಿದರು.ಹಾಗೂ ನ.25 -2019 ರಿಂದ ಜುಲೈ 31-2024 ರ ವರೆಗೆ ಪುತ್ತೂರು ವಿಭಾಗ ಬಿ.ಸಿ ರೋಡ್ ಘಟಕದಲ್ಲಿ ಕಾರ್ಯ ನಿರ್ವಹಿಸಿದರು.


ಅಪಘಾತ ಮತ್ತು ಅಪರಾಧ ರಹಿತ ಚಾಲನೆಗಾಗಿ ಇವರು 2001 ರಲ್ಲಿ ಬೆಳ್ಳಿ ಪದಕ ಪುರಸ್ಕೃತರಾಗಿದ್ದಾರೆ.ಪತ್ನಿ ಜಯಲಕ್ಷ್ಮೀ ,ಪುತ್ರ ದೀಕ್ಷಿತ್ ಕುಮಾರ್, ಸೊಸೆ ಪೂಜಾ ದೀಕ್ಷಿತ್ ,ಪುತ್ರಿ ರಕ್ಷಿತಾ ಅಶ್ವಿನ್ ಹಾಗೂ ಅಳಿಯ ಅಶ್ವಿನ್ ಕುಮಾರ್ ರವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here