ಬೀರಿಗದಲ್ಲಿ ತೋಟಕ್ಕೆ ನುಗ್ಗಿದ ಮಳೆ ನೀರು

0

ಪುತ್ತೂರು: ಜು.30ರ ಭಾರಿ ಮಳೆಗೆ ಚಿಕ್ಕಮುಡ್ನೂರು ಗ್ರಾಮದ ಬೀರಿಗದಲ್ಲಿ ಕಿರಿದಾದ ಚರಂಡಿಯಿಂದ ಮಳೆ ನೀರಿನ ಒತ್ತಡ ಹೆಚ್ಚಾಗಿ ಪಕ್ಕದ ತೋಟಕ್ಕೆ ಮಳೆ ನೀರು ನುಗ್ಗಿದೆ. ಒಬ್ಬ ಮನುಷ್ಯ ಮುಳುಗಡೆಯಾಗುವಷ್ಟು ಮಳೆ ನೀರು ತೋಟದಲ್ಲಿ ನಿಂತು ಕೆರೆಯಂತಾಗಿತ್ತು.


ಬೀರಿಗ ಶಿವಪ್ಪ ಗೌಡ ಅವರ ತೋಟ ಕೆರೆಯಂತಾಗಿತ್ತು. ಬೀರಿಗ ರಸ್ತೆಯಲ್ಲಿನ ಚರಂಡಿ ಕಿರಿದಾದ ಹಿನ್ನೆಲೆಯಲ್ಲಿ ಮಳೆ ನೀರಿನ ಒತ್ತಡ ಹೆಚ್ಚಾಗಿ ನೀರು ಶಿವಪ್ಪ ಗೌಡರ ಅಡಿಕೆ ತೋಟಕ್ಕೆ ನುಗ್ಗಿತ್ತು. ನೀರಿನ ಸೆಳೆತದಿಂದ ಅಡಿಕೆ ಸಸಿಗಳು ಮುಳುಗಡೆಯಾಗಿ ಹಾನಿಯಾಗಿದ್ದು, ಶಿವಪ್ಪ ಗೌಡರು ಅಡಿಕೆ ತೋಟಕ್ಕೆ ಹೋದಾಗ ಅವರ ಕತ್ತಿನ ತನಕ ನೀರು ತುಂಬುವಷ್ಟು ಕೃತಕ ನೆರೆಯುಂಟಾಗಿತ್ತು.

LEAVE A REPLY

Please enter your comment!
Please enter your name here