ಬಲ್ನಾಡು ಪ್ರಾ.ಕೃ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಶುಭ ಕುತ್ಯಾಡಿ

0

ಪುತ್ತೂರು:ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸೀತಾರಾಮ ಗೌಡರವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸಹಕಾರ ಸಂಘದಲ್ಲಿ ಲೆಕ್ಕಿಗರಾಗಿದ್ದ ಕೆ. ಶುಭ ಕುತ್ಯಾಡಿಯವರು ಮುಂಭಡ್ತಿ ಪಡೆದುಕೊಂಡಿದ್ದಾರೆ.


ಅರಿಯಡ್ಕ ಗ್ರಾಮದ ಕುತ್ಯಾಡಿ ನಿವಾಸಿಯಾಗಿರುವ ಶುಭರವರು 1988ರಲ್ಲಿ ಸಂಘಕ್ಕೆ ಗುಮಾಸ್ಥರಾಗಿ ನೇಮಕಗೊಂಡಿದ್ದರು. ಕಳೆದ 10ವರ್ಷಗಳಿಂದ ಸಂಘದಲ್ಲಿ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಒಟ್ಟು 36 ವರ್ಷಗಳಿಂದ ಸಂಘದಲ್ಲಿ ಕರ್ತವ್ಯ ನಿರ್ವಹಿಸಿರುವ ಶುಭರವರು ಇದೀಗ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿ ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here