ಕಾಣಿಯೂರು: ಬೆಳಂದೂರು ವಲಯದ ಶಿವಳ್ಳಿ ಸಂಪದ ಮತ್ತು ಶಿವಳ್ಳಿ ಮಹಿಳಾ ಸಂಪದ ಇದರ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಮಠದಲ್ಲಿ ಜರಗಿತು.
ಶಿವಳ್ಳಿ ಸಂಪದದ ಅಧ್ಯಕ್ಷ ಚಿದಾನಂದ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವಮೂರ್ತಿ ಬಡಿಕಿಲ್ಲಾಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಅಟಿಯ ತಿಂಗಳ ಮಹತ್ವ ವಿವರಿಸಿದರು. ಶಿವಳ್ಳಿ ಸಂಪದದ ಕೇಂದ್ರದ ಅಧ್ಯಕ್ಷ ಸುಧಿಂದ್ರ ಕುದ್ಧಣ್ಣಯ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ರಂಗನಾಥ ಉಂಗ್ರುಪುಳಿತ್ತಾಯ, ಮಹಿಳಾ ಸಂಪದದ ಅಧ್ಯಕ್ಷೆ ಪೂರ್ಣಿಮಾ ಉಪಾಧ್ಯಾಯ ಕಲ್ಪಡ ಶುಭ ಹಾರೈಸಿದರು. ಮಹಿಳಾ ಸಂಪದದ ಕೋಶಾಧಿಕಾರಿ ಇಂದಿರಾ ಬಿ. ಕೆ ಸ್ವಾಗತಿಸಿ, ಸಂಪದದ ಕಾರ್ಯದರ್ಶಿ ಪ್ರಶಾಂತ್ ಪಾರ್ಲತ್ತಾಯ ವಂದಿಸಿದರು. ಸುಮಾರು 15 ಬಗೆಯ ವಿಶೇಷ ತಿನಿಸುಗಳ ವಿಶೇಷ ಸ್ಪರ್ಧೆಗಳು ನಡೆಯಿತು.