ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಧನೆ-ಡಿಸಿಸಿ ಬ್ಯಾಂಕಿನಿಂದ ಸತತ 6ನೇ ಬಾರಿ ಪ್ರಶಸ್ತಿ ಪುರಸ್ಕಾರ

0

ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿಶೇಷ ಸಾಧನೆಗೈದಿರುವುದರಿಂದ ದ.ಕ.ಜಿ.ಕೇ.ಸಹಕಾರಿ ಬ್ಯಾಂಕಿನಿಂದ 6ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.

2023-24ನೇ ಸಾಲಿನ ಸಹಕಾರ ಸಂಘದ ಸಾಧನೆಯನ್ನು ಪರಿಗಣಿಸಿ ಅಡಿಟ್ ವರ್ಗೀಕರಣದಲ್ಲಿ ʼಎʼ ತರಗತಿ ಸ್ಥಾನ ಹೊಂದಿ ಅತ್ಯುತ್ತಮವಾದ ಕಾರ್ಯನಿರ್ವಹಣೆಗಾಗಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನಿಂದ ಕೊಡಲ್ಪಡುವ ಪ್ರಶಸ್ತಿಗೆ ಭಾಜನವಾಗಿರುತ್ತದೆ. 2023-24ನೇ ಸಾಲಿನಲ್ಲಿ ಸಹಕಾರಿ ಸಂಘವು 4480 ಎ ತರಗತಿ ಸದಸ್ಯರನ್ನು ಹೊಂದಿದ್ದು ರೂ. 3 ಕೋಟಿ 18 ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸಹಕಾರಿ ಸಂಘವು ರೂ. 21 ಕೋಟಿ 58 ಲಕ್ಷ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ.29 ಕೋಟಿ 26 ಲಕ್ಷ ಇರುತ್ತದೆ. 2023-24ನೇ ಸಾಲಿನಲ್ಲಿ ರೂ.205 ಕೋಟಿ 21 ಲಕ್ಷ ವ್ಯವಹಾರ ನಡೆಸಿದ್ದು ಪ್ರಸಕ್ತ ಸಾಲಿನಲ್ಲಿ 1 ಕೋಟಿ 3 ಲಕ್ಷ ನಿವ್ವಳ ಲಾಭಗಳಿಸಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರ ಸಂಘವು ಸುಮಾರು ರೂ.1 ಕೋಟಿ 85 ಲಕ್ಷ ಲಾಭಗಳಿಸುವ ನಿರೀಕ್ಷೆ ಮಾಡಿದ್ದೆವು. ಆದರೆ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಗಳಿಗೆ ಮೂರು ವರ್ಷಗಳಿಂದ ರೂ.43 ಲಕ್ಷ ಟಿ.ಡಿ.ಎಸ್ ಪಾವತಿಸಲಾಗಿದೆ. ಆದಾಯ ತೆರಿಗೆ ಬಾಬ್ತು ರೂ.13 ಲಕ್ಷ 62 ಸಾವಿರ ಪಾವತಿಸಲಾಗಿದೆ. ಮತ್ತು ಸರಕಾರದ ಧೀರ್ಘಾವಧಿ ಕೃಷಿ ಸಾದ ಬಡ್ಡಿ ರೂ.30 ಲಕ್ಷ 45 ಸಾವಿರ ಬರಲು ಬಾಕಿ ಇರುತ್ತದೆ. ಈ ಎಲ್ಲಾ ಮೊತ್ತಗಳಿಗೆ ಲಾಭಾಂಶದಲ್ಲಿ ಕಾದಿರಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಲಾಭಾಂಶವು ಕಡಿಮೆಯಾಗಲು ಕಾರಣವಾಗಿರುತ್ತದೆ.

ಆರ್ಯಾಪು ಸಹಕಾರಿ ಸಂಘದ ಕಾರ್ಯ ಕ್ಷೇತ್ರಕ್ಕೆ 3 ಗ್ರಾಮಗಳಾದ ಆರ್ಯಾಪು, ಕೆಮ್ಮಿಂಜೆ ಮತ್ತು ಕುರಿಯ ಗ್ರಾಮಗಳನ್ನೊಳಗೊಂಡಿರುತ್ತದೆ. ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಕುರಿಯ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಶಾಖಾ ಕಛೇರಿಯನ್ನು ಹೊಂದಿರುತ್ತದೆ. ಆರ್ಯಾಪು ಗ್ರಾಮದ ಸಂಪ್ಯ ಹಾಗೂ ಒಳತ್ತಡ್ಕ ಮತ್ತು ಕುರಿಯ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಪಡಿತರ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಕೃಷಿಕರಿಗೆ ಪಹಣಿ ಪತ್ರ ಒದಗಿಸಿಕೊಡುವ ಸೌಲಭ್ಯ ಕಲ್ಪಿಸಲಾಗಿದೆ. ಕುರಿಯ ಶಾಖೆಯಲ್ಲಿ ಕಛೇರಿಯ ಭದ್ರತೆಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಹಕಾರ ಸಂಘದ ರಸ್ತೆ ಬದಿಯಲ್ಲಿ ಹೊಸದಾಗಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಯೋಜನೆಯನ್ನು ಉಚಿತವಾಗಿ ಆನ್ ಲೈನ್ ನೋಂದಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರಿ ಸಂಘದ ಸದಸ್ಯರು ಮೃತಪಟ್ಟಲ್ಲಿ ತಕ್ಷಣ ರೂ.5೦೦೦/- ನೀಡುವ ಕಾರ್ಯಕ್ರಮ ಜಾರಿಯಲ್ಲಿರುತ್ತದೆ. ಆರ್ಯಾಪು ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ 12 ಜನ ಚುನಾಯಿತ ಸದಸ್ಯರಿದ್ದು ಅಧ್ಯಕ್ಷರಾಗಿ ಹೆಚ್. ಮಹಮ್ಮದ್ ಆಲಿ, ಉಪಾಧ್ಯಕ್ಷರಾಗಿ ಬಿ. ಸುರೇಂದ್ರ ರೈ ಬಳ್ಳಮಜಲು ನಿರ್ದೇಶಕರುಗಳಾಗಿ ಕೆ. ಸದಾನಂದ ಶೆಟ್ಟಿ ಕೂರೇಲು, , ಬಿ. ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲ ಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ತಿಮ್ಮಪ್ಪ ನಾಯ್ಕ ಜಂಗಮೊಗೇರು, ಸಂಶುದ್ದೀನ್ ನೀರ್ಕಜೆ. ರಂಜಿತ್ ಬಂಗೇರಾ ಕೆ ಸಂಪ್ಯ, ಚಂದ್ರಕಲಾ ಓಟೆತ್ತಿಮಾರು, ತೆರೆಸಾ ಮಾಗ್ದಲಿನ್ ಸಿಕ್ವೇರಾ, ಸತೀಶ್ ನಾಯ್ಕ್ ಪರ್ಲಡ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶರತ್ ಡಿ. ಸಂಘದ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್ ಹಾಗೂ ಸಿಬ್ಬಂದಿಗಳಾಗಿ ಅಜಿತ್‌ಕುಮಾರ್ ರೈ, ಸುಭಾಷಿನಿ ವಿ ರೈ, ಉಮೇಶ್‌ಎಸ್ ಕೆ. ವಿನಯ್‌ಕುಮಾರ್ ರೈ ಬಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆ.14:ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಗೊಂಡ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆ.14ರಂದು ನಡೆಯುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ನಡೆಯುವ ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರ ಕುಮಾರ್‌ರವರು ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಲಿದ್ದಾರೆ.

ಪ್ರತಿಷ್ಟಿತ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪ್ಯ ಇದರ 2023-24ರ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಪ್ರೋತ್ಸಾಹಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ. ಆ.14ರಂದು ದ.ಕ.ಜಿ.ಕೇ.ಸ. ಬ್ಯಾಂಕಿನ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು ಈ ಪ್ರಶಸ್ತಿಗೆ ಕಾರಣಕರ್ತರಾದ ನಮ್ಮ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ, ಸಹಕಾರಿ ಸಂಘದ ಗೌರವಾನ್ವಿತ ಸದಸ್ಯರುಗಳಿಗೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರಕುಮಾರ್‌ರವರಿಗೆ, ಎಲ್ಲಾ ನಿರ್ದೇಶಕರುಗಳಿಗೆ ಮತ್ತು ನಮ್ಮ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿರವರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಫೂರ್ವಕ ಕೃತಜ್ಙತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಆರ್ಯಾಪು ಪ್ರಾ.ಕೃ.ಪ.ಸ.ಸಂ.ನಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಹೇಳಿದರು.

LEAVE A REPLY

Please enter your comment!
Please enter your name here