ಕಲ್ಲಗುಡ್ಡೆ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು :ಕಲ್ಲಗುಡ್ಡೆ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಹಿದಾಯತುಲ್ ಇಸ್ಲಾಂ ಮದ್ರಸ ಕಲ್ಲಗುಡ್ಡೆ ಇದರ ವತಿಯಿಂದ ಯೂಸುಫ್ ಶಾಹೀರ್ ಯಮಾನಿ ಪೋಳ್ಯ ರವರ ದುಆ ಹಾಗೂ ಸಂದೇಶ ಭಾಷಣ ದೊಂದಿಗೆ ಪ್ರಾರಂಭಿಸಲಾಯಿತು. ಮದ್ರಸ ಅಧ್ಯಕ್ಷ ರಶೀದ್ ಹಾಜಿ ನೈತಾಡಿ ಹಾಗೂ ಕೋಶಾಧಿಕಾರಿ ಸುಲೈಮಾನ್ ಎಸ್ ಕೆ ರವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್ ಕಲ್ಲಗುಡ್ಡೆ ವಹಿಸಿದರು. ಕಾರ್ಯಕ್ರಮದಲ್ಲಿ ಮದ್ರಸ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಎಂ.ಕೆ., ಸದಸ್ಯರಾದ ಶರೀಫ್ ಕಲ್ಲಗುಡ್ಡೆ, ಮಜೀದ್ ಕಲ್ಲಗುಡ್ಡೆ, ಅಬ್ಬಾಸ್ ಕಲ್ಲಗುಡ್ಡೆ, ಮೊನುಚ್ಚ ಕಲ್ಲಗುಡ್ಡೆ, ಮುಹಮ್ಮದ್ ಕಲ್ಲಗುಡ್ಡೆ, ರಫೀಕ್ ಸಿಝ್ಲರ್, ಅದ್ಲಚ್ಚ ಕಲ್ಲಗುಡ್ಡೆ, ಇಸುಬು ಕಲ್ಲಗುಡ್ಡೆ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಕಲ್ಲಗುಡ್ಡೆ ಶಾಖೆಯ ಪ್ರಧಾನ ಕಾರ್ಯದರ್ಶಿ ಸಿನಾನ್ ಕಲ್ಲಗುಡ್ಡೆ, ಸಂಘಟನಾ ಕಾರ್ಯದರ್ಶಿ ಸಫ್ವಾನ್ ಕಲ್ಲಗುಡ್ಡೆ, ಕೋಶಾಧಿಕಾರಿ ತಸ್ರೀಫ್ ಕಲ್ಲಗುಡ್ಡೆ, ಎಂ ಕೆ ಬಾಯ್ಸ್ ಕಲ್ಲಗುಡ್ಡೆ, ಇದರ ಉಸ್ತುವಾರಿಗಳಾದ ಅನ್ಸಾರ್ ಪಂಜಳ, ನಿಯಾಝ್ ಕಲ್ಲಗುಡ್ಡೆ ಹಾಗೂ ಎಸ್‌ಕೆಎ ಎಸ್‌ಎಫ್ ಕಲ್ಲಗುಡ್ಡೆ ಶಾಖೆ ಸದಸ್ಯರು ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಊರಿನ ಪ್ರಮುಖರು ಉಪಸ್ಥಿತರಿದ್ದರು


ರುಮೈಝ್ ಕಲ್ಲಗುಡ್ಡೆ ಪ್ರತಿಜ್ಞಾ ವಿಧಿ ಬೋಧಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಮದ್ರಸ ವಿದ್ಯಾರ್ಥಿನಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಆಲಾಪನೆ ಮಾಡಿದರು ಕೂಡಿದ ಮಹನಿಯರಿಗೆ ಎಂ ಕೆ ಬಾಯ್ಸ್ ವತಿಯಿಂದ ಸಿಹಿ ತಿಂಡಿ ತಂಪು ಪಾನೀಯಗಳು ವಿತರಿಸಲಾಯಿತು.

LEAVE A REPLY

Please enter your comment!
Please enter your name here