ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ, ಕಲ್ಲಡ್ಕದಲ್ಲಿರುವ ಶ್ರೀರಾಮ ಸೆಕೆಂಡರಿ ಸ್ಕೂಲ್ ನಲ್ಲಿ ಇದೇ ಆಗಸ್ಟ್ 2ರಂದು ನಡೆದ ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಸಾಧನೆಗೈದಿರುತ್ತದೆ.

8ನೇ ತರಗತಿ ವಿದ್ಯಾರ್ಥಿಗಳಾದ ಕೆ. ಬಿ ಹರ್ಷವರ್ಧನ ( ಭಾಸ್ಕರ ಮತ್ತು ಶುಭಲತಾ ದಂಪತಿ ಪುತ್ರ ) ಮತ್ತು ಪ್ರಥಮ್ ರಾವ್ (ಮುರಳೀಧರ ರಾವ್ ಮತ್ತು ಅಮಿತಾ ರಾವ್ ಪುತ್ರ ), 9ನೇ ತರಗತಿ ವಿದ್ಯಾರ್ಥಿಗಳಾದ ಶ್ಯಾಮ್ (ಶ್ರೀಕೃಷ್ಣ ಮತ್ತು ಸೌಮ್ಯ ದಂಪತಿ ಪುತ್ರ ) ಮತ್ತು ನಿಹಾಲ್ ಸಿ. ರೈ ( ಚೇತನ್ ಕುಮಾರ್ ರೈ ಮತ್ತು ಶಾರಿಕ ಸಿ. ರೈ ದಂಪತಿ ಪುತ್ರ ) ಹಾಗೂ ಧನ್ವಿ ಕೆ.ವಿ ( ವಿಜಯ ನಾರಾಯಣ ಮತ್ತು ಪವಿತ್ರ ದಂಪತಿ ಪುತ್ರ ) ಈ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ನವೀನ್ ಕುಮಾರ್ ಇವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here