ಆತೂರು ಸದಾಶಿವ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ, ಸನ್ಮಾನ

0

ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪಾರ್ವತಿ ಮಾತೃ ಮಂಡಳಿ ವತಿಯಿಂದ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು.
ವೆಂಕಟ್ರಮಣ ಕುದ್ರೆತ್ತಾಯರವರ ನೇತೃತ್ವದಲ್ಲಿ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಪ್ರಮುಖ್ ಲಲಿತಾ ಪಲ್ಲಡ್ಕ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ ಅವರು ಶ್ರೀ ಸದಾಶಿವ ಸಭಾಭವನದ ಲೆಕ್ಕಪತ್ರ ಮಂಡಿಸಿ, ಧಾರ್ಮಿಕ ಉಪನ್ಯಾಸ ನೀಡಿದರು. ಉತ್ಸವ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷ ಭವಾನಿಶಂಕರ ಪರಂಗಾಜೆ, ಬೈಲುವಾರು ಮಹಿಳಾ ಪ್ರಮುಖರಾದ ಶ್ವೇತಾ ಸಬಳೂರು, ಸುಶೀಲ ಓಕೆ, ವಸಂತಿ ಕಲ್ಕಾಡಿ, ಶಶಿಕಲಾ ಕೊನೆಮಮಜಲು, ಲೀಲಾವತಿ ವೈಪಾಲು, ಸ್ಮೀತಾ ಪಾಜಳಿಕೆ, ಮೋಹಿನಿ ವಳಕಡಮ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ವನಜ ಪಲ್ಲಡ್ಕ, ವಿನಯ ರೈ ಕೊಯಿಲ ಪಟ್ಟೆ, ಸಂಜೀವ ಗೌಡ ಕೊನೆಮಜಲು, ಶ್ರೀರಾಮ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅನ್ನದಾನ ಸೇವಾರ್ಥಿಗಳನ್ನು ಗೌರವಿಸಲಾಯಿತು. ಯೋಗದಲ್ಲಿ ಸಾಧನೆ ಮಾಡಿದ ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ, ಕೊಯಿಲ ಗ್ರಾಮದ ಸಂಕೇಶ ನಿವಾಸಿ ಉಮೇಶ್ ಮತ್ತು ಪೂರ್ಣಿಮಾ ದಂಪತಿ ಪುತ್ರಿ ಅಶ್ವಿಕಾ ಅವರನ್ನು ಸನ್ಮಾನಿಸಲಾಯಿತು. ಜಯಂತಿ ಆರ್ ಗೌಡ ಪ್ರಸ್ತಾವಿಸಿ ಸ್ವಾಗತಿಸಿದರು. ಯಕ್ಷತಾ ಏಣಿತ್ತಡ್ಕ ವಂದಿಸಿದರು. ಸುನಿತಾ ಕೆಮ್ಮಾರ ನಿರೂಪಿಸಿದರು.

LEAVE A REPLY

Please enter your comment!
Please enter your name here