ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಿನ್ಮಯೀ ಮಹಿಳಾ ಭಜನಾ ಮಂಡಳಿಯ ಪ್ರಾರಂಭೋತ್ಸವ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಆ.18ರಂದು ಸಂಜೆ ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿಯ ಪ್ರಾರಂಭೋತ್ಸವ ನಡೆಯಿತು.
ಜಯಶ್ರೀ ರಾಜಗೋಪಾಲ ಭಟ್ ದೀಪ ಬೆಳಗಿ ನೂತನ ಭಜನಾ ಮಂಡಳಿಗೆ ಶುಭ ಹಾರೈಸಿದರು.

ನಂತರ ಕ್ಷೇತ್ರದಲ್ಲಿ ಭಜನಾ ಸೇವೆ ನಡೆದು ಮಹಿಷಮರ್ದಿನಿ ದೇವಿಗೆ ವಿಶೇಷ ಹೂವಿನ ಪೂಜೆಯನ್ನು ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ನೆರವೇರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ನಿರಂಜನ್ ರೈ ಮಠಂತಬೆಟ್ಟು, ಡಾ. ಶಿವಪ್ರಕಾಶ್ ಮೋನಡ್ಕ, ಜಗನ್ನಾಥ ಶೆಟ್ಟಿ ನಡುಮನೆ, ಸತೀಶ್ ನಾಯಕ್ ಮೋನಡ್ಕ, ಸಂತೋಷ್ ರೈ ಕೆದಿಕಂಡೆಗುತ್ತು, ರಮೇಶ್ ನಾಯಕ್ ನಿಡ್ಯ, ಸದಾಶಿವ ಸಾಮಾನಿ ಸಂಪಿಗೆದಡಿ, ಶ್ರೀಕಾಂತ್ ಯಾದವ್, ಗೌತಮ್ ಕುಕ್ಯಾನ್, ರೇಣುಕಾ ಎಂ. ರೈ ಮಠಂತಬೆಟ್ಟು, ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ, ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ, ರಶ್ಮಿ ಎನ್. ರೈ, ಪೂರ್ಣಿಮಾ ಎಸ್. ಶೆಟ್ಟಿ, ಭಜನಾ ಮಂಡಳಿಯ ಸದಸ್ಯರು ಸಹಿತ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here