ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯಿಂದ “ಆಟಿಡ್ ಒಂಜಿ ದಿನ” ಕಾರ್ಯಕ್ರಮ

0

ಪುತ್ತೂರು: ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಇದರ ವತಿಯಿಂದ “ಆಟಿಡ್ ಒಂಜಿ ದಿನ” ಕಾರ್ಯಕ್ರಮವನ್ನು ನಿಕಟ ಪೂರ್ವ ಗೌರವಾಧ್ಯಕ್ಷ ಯಥೀಂದ್ರನಾಥ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು.

ಪುತ್ತೂರು ತೀಯಾ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಖಜಾಂಜಿ ಬಿ.ಎಂ. ಶ್ರೀಧರ್ , ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ ರಾಜೀವ್ , ಮುಖ್ಯ ಅತಿಥಿ ವಿಜಯಕುಮಾರ್ ಶಿರಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ , ದಂಪತಿಗಳಿಗೆ, ಮಹಿಳೆಯರಿಗೆ ,ಹಾಗೂ ಪುರುಷರಿಗೆ, ಹೀಗೆ ವಿವಿಧ ರೀತಿಯಲ್ಲಿ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಪುತ್ತೂರು ತೀಯಾ ಸಮಾಜದ ಪದಾಧಿಕಾರಿಗಳೊಂದಿಗೆ ನಿಂತಿಕಲ್ಲು ಘಟಕದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಬೋಳ್ನಾಡು ತೀಯಾ ವಾಹಿನಿ ಪ್ರಮುಖ ಸದಾಶಿವ ಅಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಾಶಿವ ಮಾತನಾಡಿ, ತೀಯಾ ಸಮಾಜದ ಹಾಗೆಯೇ ನಮ್ಮ ಬೋಳ್ನಾಡು ಕ್ಷೇತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಂತೋಷ್ ಮುರ ಸ್ವಾಗತಿಸಿ, ವಂದಿಸಿದರು.ಪುರುಷೋತ್ತಮ ಕೇಪುಳು,ಅಶ್ವಿನಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತೀಯಾ ಸಮಾಜದ ಉಪಾಧ್ಯಕ್ಷ ರಾಜೇಶ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಸಂಧ್ಯಾ ರಾಜೇಶ್ ಸಹಕರಿಸಿದರು. ಎಣ್ಮೂರು-ನಿಂತಿಕಲ್ ಉಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು , ಬೋಳ್ನಾಡು ತೀಯಾ ವಾಹಿನಿಯ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here