ರಾಜೇಶ್ ರೈ ಪರ್ಪುಂಜ ನಿರ್ಮಾಣದ ‘ಅಮರ್ ವೀರೆರ್’ ತುಳು ಆಲ್ಬಂ ಸಾಂಗ್‌ನ ಪೋಸ್ಟರ್ ಬಿಡುಗಡೆ

0

ಪುತ್ತೂರು: ತುಳುನಾಡಿನ ದೈವಿ ಸಂಭೂತ ವೀರ ಪುರುಷರಾದ ಕೋಟಿ ಚೆನ್ನಯರು ನೆಲೆ ನಿಂತಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯ ಬಗ್ಗೆ ಸಾಹಿತ್ಯವಿರುವ ರಾಜೇಶ್ ರೈ ಪರ್ಪುಂಜ ನಿರ್ಮಾಣದಲ್ಲಿ ಸ್ಮೃತಿ ಪಲ್ಲತ್ತಾರು ಗಾಯನದಲ್ಲಿ ಮೂಡಿಬರಲಿರುವ ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ಎಂಬ ತುಳು ಭಕ್ತಿಗೀತೆಯ ಆಲ್ಬಂ ಸಾಂಗ್‌ನ ಪೋಸ್ಟರ್ ಅನ್ನು ಆ.16 ರಂದು ರಾಮಜಾಲು ಗರಡಿಯ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ಅರ್ಚಕ ಹರೀಶ್ ಶಾಂತಿ ಹಾಗೂ ರಾಮಜಾಲು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಶುಭಾಶೀರ್ವಾದದೊಂದಿಗೆ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ನವೀನ್ ಕುಮಾರ್ ನಾಕೂರು ಮತ್ತು ಪ್ರವೀಣ್ ಕಕ್ಕೆಬೆಟ್ಟು ಸಾಹಿತ್ಯ, ಪರ್ಪುಂಜ ಸ್ನೇಹ ಯುವಕ ಮಂಡಲದ ಅಧ್ಯಕ್ಷ ವಿಪಿನ್ ಶೆಟ್ಟಿ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್ ಹಾಗೂ ಪದಾಧಿಕಾರಿಗಳ ಸಂಪೂರ್ಣ ಸಹಕಾರ, ಕುಂಬ್ರ ಕ್ಲಿಕ್ ಡಿಜಿಟಲ್ ಸ್ಟುಡಿಯೋದ ಕಿಶೋರ್‌ರವರ ಡಿಒಪಿ ಮತ್ತು ಎಡಿಟಿಂಗ್ ಇದ್ದು ಹಾಡಿನ ಧ್ವನಿ ಮುದ್ರಣ ಮತ್ತು ಮಾಸ್ಟರಿಂಗ್ ಮಿಥುನ್‌ರಾಜ್ ವಿದ್ಯಾಪುರ ಶ್ರೀರಾಜ್ ಮ್ಯೂಸಿಕಲ್ ವಲ್ಡ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಮಹಾಲಿಂಗೇಶ್ವರ ಮೊಬೈಲ್ಸ್ ಕುಂಬ್ರ ಇವರ ಸಹಕಾರವಿದೆ.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಆಲ್ಬಂ ಸಾಂಗ್ ನಿರ್ಮಾಪಕ ರಾಜೇಶ್ ರೈ ಪರ್ಪುಂಜ, ಸ್ನೇಹ ಯುವಕ ಅಧ್ಯಕ್ಷ ವಿಪಿನ್ ಶೆಟ್ಟಿ, ಗೌರವಾಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಕಾರ್ಯದರ್ಶಿ ನಿತಿನ್ ಗೌಡ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್, ಗೌರವಾಧ್ಯಕ್ಷೆ ಬೇಬಿ ರೈ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಆಲ್ಬಂ ಸಾಂಗ್ ಆ.26 ರಂದು ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here