ವಿವೇಕಾನಂದ ಯುವಕ ವೃಂದದ ವತಿಯಿಂದ ವನಮಹೋತ್ಸವ ಹಾಗೂ ಸ್ವಚ್ಚತಾ ಕಾರ್ಯಕ್ರಮ

0

ಅರಿಯಡ್ಕ: ಆ. 18 ರಂದು ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಇದರ ವತಿಯಿಂದ ವನಮಹೋತ್ಸವ ಸ್ವಚ್ಚತಾ ಕಾರ್ಯಕ್ರಮ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪಾಣಾಜೆ ವಲಯ ಅರಣ್ಯ ವೀಕ್ಷಕ ದೇವಪ್ಪ ನಾಯ್ಕ ಮಾಯಿಲಕೊಚ್ಚಿ ಹಾಗೂ ವಿಟ್ಲ ಆರಕ್ಷಕ ಠಾಣೆಯ ಮೋಹನ್ ಚಾಲನೆ ನೀಡಿದರು.

ಯುವಕ ವೃಂದದ ಅಧ್ಯಕ್ಷ ಉದಯ ಕುಮಾರ್ ಆಕಾಯಿ, ಗೌರವ ಸಲಹೆಗಾರ ಕೃಷ್ಣ ಕುಲಾಲ್ ಡಿ, ದೀಪಕ್ ಕುಲಾಲ್, ಮಾಜಿ ಉಪಾಧ್ಯಕ್ಷ ಮುಕುಂದ ನಾಯ್ಕ ದೇವುಮೂಲೆ, ಸದಸ್ಯರಾದ ಜಯಪ್ರಕಾಶ್ ಜೆಪಿ ಕುತ್ಯಾಡಿ ,ಮಧುಸೂದನ್ ಗೌಡ ಆಚಾರಿಮೂಲೆ, ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕರ್ಮಿ ಕರುಣಾಕರ ಗೌಡ ಆಚಾರಿಮೂಲೆ , ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಯುವಕ ವೃಂದದ ಸಾಂಸ್ಕೃತಿಕ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ ಸ್ವಾಗತಿಸಿ,ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here