ಅಗತ್ತಾಡಿ: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ದಾರಕ್ಕೆ ಚಾಲನೆ

0

ಪೆರಾಬೆ: ಅಗತ್ತಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ದಾರ ಕೆಲಸಗಳಿಗೆ ಆ.19ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಕ್ಷೇತ್ರದ ತಂತ್ರಿವರ್ಯರಾದ ಹರೀಶ್ ಶಾಂತಿ ಪುತ್ತೂರು ಇವರು ವೈದಿಕ ವಿಧಿ ವಿಧಾನ ನೆರವೇರಿಸಿದರು. ಕ್ಷೇತ್ರದ ಟ್ರಸ್ಟ್‌ನ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಬಂಗೇರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಅಲೆಕ್ಕಾಡಿ, ಕ್ಷೇತ್ರದ ದೈವಜ್ಞರಾದ ಶ್ರೀಧರ್ ಬಲ್ಯಾಯ, ಟ್ರಸ್ಟ್‌ನ ಅಧ್ಯಕ್ಷರಾದ ಸಂದೀಪ್ ಕಾರ್ಕಳ, ಗೌರವಾಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಉಪಾಧ್ಯಕ್ಷರಾದ ಉದಯ ಸಾಲಿಯಾನ್ ಮಾಯಿಲ್ಗ, ಅಶೋಕ್ ಕೊಯಿಲ, ವಸಂತ ಪೂಜಾರಿ ಕೆಎಸ್‌ಆರ್‌ಟಿಸಿ, ಬಾಲಕೃಷ್ಣ ಪೂಜಾರಿ ಸಾರಕರೆ, ದಿನೇಶ್ ಕೇಪುಲು, ಜನಾರ್ದನ ಕದ್ರ, ಶುಶ್ರುತ್ ಉಪ್ಪಿನಂಗಡಿ, ತೇಜಸ್ ಸನಿಲ್ ಮಂಗಳೂರು, ಗೌರವ ಸಲಹೆಗಾರರಾದ ಲಿಂಗಪ್ಪ ಪೂಜಾರಿ ಕೇಪುಲು ಹೊಸಮನೆ, ಗಂಗಾರತ್ನ ವಸಂತ್ ಅಗತ್ತಾಡಿ, ಗೀತಾಮಣಿ ಬೆತ್ತೋಡಿ, ಜಗನ್ನಾಥ್ ಪೂಜಾರಿ ಮುಕ್ಕೂರು, ಹರ್ಷ ಅಲೆಕ್ಕಾಡಿ, ಸಂಚಾಲಕರಾದ ವಿಜಯ್ ಕುಮಾರ್ ಕೆದಿಲ, ಅಜಯ್ ಬೆತ್ತೋಡಿ, ವಿನಯ ಕುಮಾರ್ ಕೆದಿಲ, ಹರೀಶ್ ಪೂಜಾರಿ ಅಗತ್ತಾಡಿ, ಪ್ರಧಾನ ಕಾರ್ಯದರ್ಶಿ ಸಂದೇಶ್ ಅಗತ್ತಾಡಿ, ಕಾರ್ಯಾಧ್ಯಕ್ಷರಾದ ಜೈಸ್ ಅಗತ್ತಾಡಿ, ಖಜಾಂಜಿ ಶ್ವೇತಾ ಯೋಗೇಶ್ ಪುತ್ತೂರು, ಜೊತೆ ಕಾರ್ಯದರ್ಶಿ ಹರ್ಷಿತ್ ಮಾಯಿಲ್ಗ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ತೇಜಸ್ ಕೇಪುಲು, ಟ್ರಸ್ಟಿ ತಪಸ್ಯ ಅಭಿಜಿತ್ ಮಂಗಳೂರು, ರಾಧಾಕೃಷ್ಣ ರೈ ಮನವಳಿಕೆ ಗುತ್ತು, ಚಂದ್ರಶೇಖರ ರೈ ಅಗತ್ತಾಡಿ, ತಿಮ್ಮಪ್ಪ ಗೌಡ ಕುಂಟ್ಯಾನ ತರವಾಡು, ಗಣರಾಜ್ ಆಲಂಕಾರು, ಸಾಂತಪ್ಪ ಗೌಡ, ರಮೇಶ್ ಗೌಡ, ಆನಂದ ಗೌಡ, ಶಿಲ್ಪಿ ಉಮೇಶ್ ಪೂಜಾರಿ ಬಳ್ಪ, ಪ್ರವೀಣ್ ಪೂಜಾರಿ ಕುಂಞಲಡ್ಡ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

(ಫೋಟೋ ಇದೆ-ಅಗತ್ತಾಡಿ ೧, ಅಗತ್ತಾಡಿ ೨)

LEAVE A REPLY

Please enter your comment!
Please enter your name here