ಹಿರೆಬಂಡಾಡಿ: 25 ದಿನಗಳ ಬಳಿಕ ರಸ್ತೆಗೆ ಬಿದ್ದ ಮಣ್ಣು ತೆರವು

0


ಹಿರೆಬಂಡಾಡಿ: ಸುದ್ದಿಬಿಡುಗಡೆ ಹಾಗೂ ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಉಪ್ಪಿನಂಗಡಿ-ಹಿರೆಬಂಡಾಡಿ ರಸ್ತೆಯ ನೂಜಿ ಎಂಬಲ್ಲಿ ಬರೆ ಜರಿದು ರಸ್ತೆಗೆ ಬಿದ್ದು ಮಣ್ಣು ತೆರವುಗೊಳಿಸಲಾಗಿದೆ. ಸುಮಾರು 25 ದಿನಗಳ ಬಳಿಕ ರಸ್ತೆಗೆ ಬಿದ್ದಿದ್ದ ಮಣ್ಣು ತೆರವುಗೊಂಡಿದೆ.

ಆ.1ರಂದು ಸುರಿದ ಭಾರೀ ಮಳೆಗೆ ಉಪ್ಪಿನಂಗಡಿ-ಹಿರೆಬಂಡಾಡಿ ರಸ್ತೆಯ ಹಿರೆಬಂಡಾಡಿ ಗ್ರಾಮದ ನೂಜಿ ಎಂಬಲ್ಲಿ ರಸ್ತೆ ಪಕ್ಕದ ಬರೆ ಜರಿದು ಮಣ್ಣು ರಸ್ತೆಗೆ ಬಿದ್ದಿತ್ತು. ಇದರಿಂದಾಗಿ ರಸ್ತೆಯ ಅರ್ಧ ಭಾಗ ಮಣ್ಣಿನಿಂದ ಮುಚ್ಚಿ ಹೋಗಿತ್ತು. ಮಣ್ಣು ಬಿದ್ದ ಜಾಗ ತಿರುವು ಆಗಿರುವುದರಿಂದ ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯೂ ಇತ್ತು. ಇಲ್ಲಿನ ಸಮಸ್ಯೆ ಬಗ್ಗೆ ಆ.23ರಂದು ಸುದ್ದಿ ವೆಬ್‌ಸೈಟ್ ಹಾಗೂ ಆ.26ರ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ಹೆದ್ದಾರಿಯಲ್ಲಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಮಣ್ಣು ತೆರವುಗೊಂಡಿದೆ. ಪಿಡಬ್ಲ್ಯುಡಿ ಇಲಾಖೆ ಮಣ್ಣು ತೆರವುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here