ಭಾರತ್ ಸ್ಕೌಟ್ ಗೈಡ್ಸ್ ಪರೀಕ್ಷೆ: ರಾಮಕುಂಜ ಆ.ಮಾ.ಶಾಲೆಯ 23 ವಿದ್ಯಾರ್ಥಿಗಳು ಚತುರ್ಥ ಚರಣ/ಹಿರಕ್ ಗರಿ ಪರೀಕ್ಷೆಯಲ್ಲಿ ಉತ್ತೀರ್ಣ

0

ರಾಮಕುಂಜ: 2023-24ನೇ ಸಾಲಿನ ಭಾರತ ಸ್ಕೌಟ್ ಮತ್ತು ಗೈಡ್ಸ್‌ನ ಚತುರ್ಥ ಚರಣ ಹಿರಕ್ ಗರಿ ಪರೀಕ್ಷೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 23 ಕಬ್ ಬುಲ್ ಬುಲ್ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.


ಕಬ್ ವಿಭಾಗದಲ್ಲಿ ಸನ್ವಿತ್ ಪೂಜಾರಿ, ಅಕ್ಷಯ್ ಕೆ, ತ್ರಿಶಾನ್ ಶೆಟ್ಟಿ, ಜಶೂನ್ ಎ.ಎಲ್., ಶ್ರೀನಿವಾಸ್ ಪ್ರಭು ಹೆಚ್., ವಿಹಾನ್ ಎಂ., ಅದ್ವಿಕ್ ಎ. ಎಸ್., ಹೃಷಿಕ್ ಓ.ಆರ್., ಹವಿಶ್ ಸಿ.ಹೆಚ್., ಕುಶ್ಮಿತ್ ಹಾಗೂ ಚಿರಾಗ್ ಎಸ್ ಉತ್ತೀರ್ಣರಾಗಿದ್ದಾರೆ. ಬುಲ್ ಬುಲ್ ವಿಭಾಗದಲ್ಲಿ ಜಾನ್ವಿ ಡಿ, ಸಾನ್ವಿ ಗೌಡ ಬಿ.ಎಸ್, ಚಾರ್ವಿ ಕೆ., ಖುಷಿ ಜೆ.ಹೆಚ್., ಇಶಾನಿ ಎ.ಜಿ., ಸ್ವಪ್ರಿಯಾ ಕೆ, ಖುಷಿ ಎ, ವೀಕ್ಷಾ ಕೆ.ಎ, ಸಮನ್ವಿ ಕೆ.ಎ, ಅರ್ಥ ಟಿ.ಪಿ, ಡಿ.ಕೆ.ಮನಸ್ವಿ ಹಾಗೂ ಪ್ರಾಗ್ಯರವರು ತೇರ್ಗಡೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ, ಮುಖ್ಯೋಪಾಧ್ಯಾಯಿನಿ ಲೋಹಿತ ಎ ಇವರ ಮಾರ್ಗದರ್ಶನದೊಂದಿಗೆ ಕಬ್ ಮಾಸ್ಟರ್‌ಗಳಾದ ಸುನಂದ ಕೆ.ಸಿ, ಕವಿತಾ ಬಿ., ಹಾಗೂ ಫ್ಲಾಕ್ ಲೀಡರ್‌ಗಳಾದ ಸಂಧ್ಯಾ ಎ, ಕಾವ್ಯ ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here