ಕೂಡುರಸ್ತೆ: ರಸ್ತೆಯಿಂದ ಇನ್ನೂ ತೆರವಾಗದ ಧರೆ ಕುಸಿತದ ಮಣ್ಣು..!- ಸಂಬಂಧಪಟ್ಟವರು ಇತ್ತ ಗಮನಹರಿಸುವರೇ

0

ಪುತ್ತೂರು: ಕೂಡುರಸ್ತೆಯಿಂದ ತಿಂಗಳಾಡಿಗೆ ಹೋಗುವ ರಸ್ತೆ ಬದಿಯಲ್ಲಿ ಧರೆ ಕುಸಿತದ ಮಣ್ಣು ತೆರವುಗೊಳಿಸದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯುಂಟಾಗಿದ್ದು, ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ.

ತಿಂಗಳ ಹಿಂದೆ ಭಾರೀ ಮಳೆಯ ಸಂದರ್ಭ ಕೂಡುರಸ್ತೆ-ತಿಂಗಳಾಡಿ ಮಧ್ಯೆ ತಿರುವಿನಲ್ಲಿ ಧರೆ ಕುಸಿತಗೊಂಡಿದ್ದು, ಅಲ್ಪ ಮಣ್ಣು ರಸ್ತೆಗೆ ಕೂಡಾ ಬಿದ್ದಿತ್ತು. ಇದೀಗ ತಿಂಗಳು ಕಳೆದರೂ ಧರೆ ಕುಸಿತದ ಮಣ್ಣು ಅಲ್ಲೇ ಬಾಕಿಯಾಗಿದ್ದು ರಸ್ತೆಯ ಒಂದು ಬದಿಯಲ್ಲೂ ಮಣ್ಣು ಹಾಗೆಯೇ ಇದೆ. ಸಂಬಂಧಪಟ್ಟವರಿಗೆ ಈ ವಿಚಾರ ತಿಳಿದಿಲ್ಲವೋ? ಅಥವಾ ಗೊತ್ತಿದ್ದೂ ಮಣ್ಣು ತೆರವುಗೊಳಿಸದೇ ಸುಮ್ಮನಾಗಿದ್ದಾರೋ ಗೊತ್ತಿಲ್ಲ. ಅಪಾಯ ಸಂಭವಿಸುವ ಮುನ್ನ ಮಣ್ಣನ್ನು ತೆರವು ಮಾಡಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here