34ನೇ ನೆಕ್ಕಿಲಾಡಿ:ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ದುರ್ಗಾಪೂಜೆ, ಶ್ರೀ ಕೃಷ್ಣ ಜನ್ಮಾಷ್ಠಮಿ

0

ಪುತ್ತೂರು: 34ನೇ ನೆಕ್ಕಿಲಾಡಿ ಸುಭಾಶ್‌ ನಗರದ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ 20ನೇ ವರ್ಷದ ದುರ್ಗಾಪೂಜೆ, ಶ್ರೀ ಕೃಷ್ಣ ಜನ್ಮಾಷ್ಠಮಿ ಆ.31ರಂದು ರಾಘವೇಂದ್ರ ಭಟ್‌ ನೇತೃತ್ವದಲ್ಲಿ ದುರ್ಗಾಪೂಜೆ ನಡೆಯಿತು.

ಮಂದಿರದ ಕಾರ್ಯದರ್ಶಿ ದಿನಕರ ಆಚಾರ್ಯ ದೀಪ ಬೆಳಗಿಸಿದರು.ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ, ಜಾರುಕಂಬ, ಮಡಿಕೆ ಹೊಡೆಯುವುದು, ಆಟಗಳು ನಡೆಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮನೋಜ್‌ ಕುಮಾರ್‌ ಕಟ್ಟೆಮಾರ್‌ ಅತಿಥಿಯಾಗಿ ಭಾಗವಹಿಸಿದರು. ಬಿ.ಕೆ ಆನಂದ, ದಿವಾಕರ ಪೂಜಾರಿ, ದಿನಾಕರ ಆಚಾರ್ಯ, ಅಧ್ಯಕ್ಷ ಪವನ್‌ ಕುಮಾರ್‌, ಅಶ್ವಥ್‌ ಭಂಡಾರಿ, ಶೇಖರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಿ ಶೆಟ್ಟಿ, ನಾಗರಾಜ, ನಾರಾಯಣ ಭಟ್‌, ಗುರುರಾಜ ಭಟ್‌, ನಿಶಿತಾ ನಾಯಕ್‌, ಸುಶೀಲಾ ಭಟ್‌, ಜಯರಾಮ್‌ ಶೆಟ್ಟಿ, ಮೋಹನ್‌ ಕುಮಾರ್‌,ಕಮಲಾಕ್ಷಿ, ಹರೀಶ್‌ ಕುಮಾರ್‌ ನೀರಳ, ಸುಕುಮಾರ ಗೌಡ,ರುದ್ರಯ್ಯ ಆಚಾರ್ಯ, ಈಶ್ವರ ಕ್ಷೌರಿಕ, ರುದ್ರಯ್ಯ ಆಚಾರ್ಯ,ಗಣೇಶ ದೇವಾಡಿಗ, ವಸಂತ ಪೂಜಾರಿ ಮುರಳಿ, ಸಂಪತ್‌, ಪ್ರಕಾಶ್‌ ಗೌಡ, ದಿನೇಶ ಹೋಮ್‌ ಗಾರ್ಡ್‌, ಹಲವರು ಉಪಸ್ಥಿತರಿದ್ದರು.

ಮಾಧವ ಭಟ್‌, ವಿನೋದ ಅಡೆಕ್ಕಲ್‌ ಅವರನ್ನು ಸನ್ಮಾನಿಸಲಾಯಿತು.31 ಮುದ್ದು ಬಾಲಕೃಷ್ಣ ಭಾಗವಹಿಸಿದ್ದರು.ಸಂಪತ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here