ಉರುಳಿಗೆ ಬಿದ್ದ ಉಡದ ರಕ್ಷಣೆ

0

ಪುತ್ತೂರು: ನೈಲಾನ್‌ ಹಗ್ಗ ಕುತ್ತಿಗೆಗೆ ಬಿಗಿದು ಪ್ರಾಣಾಪಾಯದಲ್ಲಿದ್ದ ಉಡವೊಂದನ್ನು ಪುತ್ತೂರಿನ ಖ್ಯಾತ ಉರಗತಜ್ಞ ಡಾ. ರವೀಂದ್ರನಾಥ್ ಐತಾಳ ರಕ್ಷಿಸಿದ್ದಾರೆ.

ನಗರದ ಸೂತ್ರಬೆಟ್ಟುವಿನಲ್ಲಿ ಯಾರೋ ಇಟ್ಟ ನೈಲಾನ್‌ ಹಗ್ಗದ ಉರುಳಿಗೆ ಉಡ ಸಿಕ್ಕಿಬಿದ್ದಿದೆ. ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡರೂ, ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡಿತ್ತು. ಉಸಿರಾಡಲು ಕಷ್ಟಪಡುತ್ತಿದ್ದ ಉಡವನ್ನು ಕಂಡ ಸ್ಥಳೀಯರು ಉರಗ ತಜ್ಞ ಐತಾಳರಿಗೆ ಮಾಹಿತಿ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದ ಐತಾಳರು ಉರುಳಿನಿಂದ ಉಡಕ್ಕೆ ಮುಕ್ತಿ ನೀಡಿ ಉಡ ಸ್ವತಂತ್ರ್ಯವಾಗಿ ಬಿಡಲಾಯಿತು.

LEAVE A REPLY

Please enter your comment!
Please enter your name here