ಸವಣೂರಿನಲ್ಲಿ ಭದ್ರ ಕನ್‌ಸ್ಟ್ರಕ್ಷನ್ ಶುಭಾರಂಭ

0

ಸವಣೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಸೆ.12ರಂದು ಭದ್ರ ಕನ್‌ಸ್ಟ್ರಕ್ಷನ್ ಶುಭಾರಂಭಗೊಂಡಿತು.ನಿವೃತ್ತ ಶಿಕ್ಷಕ ಶ್ರೀ ರಾಮ ಭಟ್ ಕುಕ್ಕುಜೆ ಅವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ,ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಸಮಾಜಮುಖಿ ಚಿಂತನೆಯ ಯುವಕರು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿ.ನೂತನ ಸಂಸ್ಥೆಗೆ ಎಲ್ಲರೂ ಸಹಕಾರ ಸಿಗಲಿ,ಉದ್ಯಮ ಕ್ಷೇತ್ರದಲ್ಲಿ ಭದ್ರ ಕನ್‌ಸ್ಟ್ರಕ್ಷನ್ ಉನ್ನತ ಮಟ್ಟಕ್ಕೆ ಏರುವಂತಾಗಲಿ ಎಂದು ಶುಭಹಾರೈಸಿದರು.ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕೋಡಿಬೈಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ, ಧಾರ್ಮಿಕ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ,ಡಾ.ವಿಶ್ವನಾಥ ಭಟ್ ಕಾನಾವು, ಡಾ.ನರಸಿಂಹ ಶರ್ಮ ಕಾನಾವು,ಶ್ರೀ ದೇವಿ ಕಾನಾವು,ರಾಜರಾಮ ಪ್ರಭು ಅಶ್ವಿನಿ ಫಾರ್ಮ್, ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ, ಸದಸ್ಯರಾದ ಗಿರಿಶಂಕರ ಸುಲಾಯ, ರಾಜೀವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು,ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ಅಳಂಗಪ್ಪೆ,ಬಾಲಕೃಷ್ಣ ಏನೇಕಲ್ಲು, ಎಪಿಎಂಸಿ ಮಾಜಿ ಸದಸ್ಯಎಡಪತ್ಯ ಚಂದ್ರ ಭಟ್,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್ ಕುಕ್ಕುಜೆ ,ಪ್ರಮೋದ್ ಕೋಡಿಬೈಲು,ಡಾ.ಸುಬ್ರಹ್ಮಣ್ಯ ಭಟ್ , ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಪುತ್ತೂರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ ಆಲಂಕಾರು,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ
ಸುಪ್ರಿತ್ ರೈ ಖಂಡಿಗ ,ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,ಉಪಾಧ್ಯಕ್ಷ ರಾಘವ ಗೌಡ ಸವಣೂರು, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ.,ಕಾರ್ಯದರ್ಶಿ ಕೀರ್ತನ್ ಕೋಡಿಬೈಲು, ಸವಣೂರು ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ,ಪ್ರಸಾದ್ ರೈ ಬೈಲಾಡಿ,ಸತೀಶ್ ಬಲ್ಯಾಯ, ಮೊದಲಾದವರಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಸವಣೂರು ಮುಗೇರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಪದ್ಮನಾಭ ಕುಂಜತ್ತಾಯ ಅವರು ಪೂಜೆ ನೆರವೇರಿಸಿದರು.

ಅರುಣ್ ಕುಮಾರ್ ಪುತ್ತಿಲ ಭೇಟಿ
ಸಂಸ್ಥೆಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಪ್ರಜ್ವಲ್ ಕೆ.ಆರ್.,ಸಚಿನ್ ಭಂಡಾರಿ,ಮನೀಶ್ ಕುಲಾಲ್ ಮೊದಲಾದವರಿದ್ದರು.

ಭದ್ರ ಕನ್‌ಸ್ಟ್ರಕ್ಷನ್‌ನಲ್ಲಿ ವಿವಿಧ ಸೇವೆ
ಸಂಸ್ಥೆಯಲ್ಲಿ ವಾಸ್ತು ಪ್ರಕಾರ ಆರ್ಕಿಟೆಕ್ಚರಲ್ ಪ್ಲಾನ್,ಇಂಟೀರಿಯರ್ ಡಿಸೈನ್ & ವರ್ಕ್ಸ್, ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಾಣಗಳು,ಎಲೆಕ್ಟ್ರಿಕಲ್ ವರ್ಕ್ಸ್, 2D & 3D ವಿನ್ಯಾಸ, ಟೈಲ್ಸ್ ಮತ್ತು ಗ್ರಾನೈಟ್ ವರ್ಕ್ಸ್,ಎಸ್ಟಿಮೇಶನ್ ,ಕಟ್ಟಡ ಸಾಮಗ್ರಿಗಳ ಪೂರೈಕೆಗಳ ಸೇವೆ ಮಾಡಲಾಗುತ್ತದೆ.ಸಾರ್ವಜನಿಕರು ಸಹಕರಿಸುವಂತೆ ಸಂಸ್ಥೆಯ ಕನ್‌ಸ್ಟಲಿಂಗ್ ಎಂಜಿನಿಯರ್ ಡಾ.ಕಿಶೋರ್ ಕುಮಾರ್, ಸಿವಿಲ್ ಗುತ್ತಿಗೆದಾರರಾದ ಗಂಗಾಧರ ಪೆರಿಯಡ್ಕ, ರಾಜೇಶ್ ಇಡ್ಯಾಡಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here