ಬೆಟ್ಟಂಪಾಡಿ: 12ನೇ ವರ್ಷದ ಸಾಮೂಹಿಕ ದುರ್ಗಾಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ಬೆಟ್ಟಂಪಾಡಿ: ವಿಶ್ವಹಿಂದೂ ಪರಿಷದ್, ಬಜರಂಗದಳ,‌ ಮಾತೃಶಕ್ತಿ, ದುರ್ಗಾವಾಹಿನಿ ಪೂಜಾ ಸಮಿತಿ ವತಿಯಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ.4ರಂದು ನಡೆಯಲಿರುವ 12ನೇ ವರ್ಷದ ಸಾಮೂಹಿಕ ದುರ್ಗಾ ಪೂಜೆಯ ಆಮಂತ್ರಣ ಪತ್ರ ಬಿಡುಗಡೆಯು ಸೆ.14ರಂದು ನಡೆಯಿತು. 

ಹಿರಿಯ ಸ್ವಯಂಸೇವಕ ಕುಂಞಿಕೃಷ್ಣ ಮಣಿಯಾಣಿ ತಲೆಪ್ಪಾಡಿಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಪೂಜಾ ಸಮಿತಿ ಅಧ್ಯಕ್ಷ  ದೇವಿಪ್ರಸಾದ್ ಇರ್ದೆಬೀಡು, ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಗೌರವಾಧ್ಯಕ್ಷ ಆರ್.ಬಿ. ಸುವರ್ಣ, ಕೋಶಾಧಿಕಾರಿ ಮನೋಜ್ ಕುಮಾರ್ ರೈ, ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here