ಸೆ. 21ರಿಂದ ಕೊಡಿಪ್ಪಾಡಿ ದೇವಸ್ಥಾನದಲ್ಲಿ ಉಚಿತ ಯೋಗ ಶಿಕ್ಷಣ ತರಗತಿ

0

ಪುತ್ತೂರು: ಎಸ್‌ಪಿವೈಎಸ್‌ಎಸ್ ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು ವತಿಯಿಂದ ಕೊಡಿಪಾಡಿ ಶ್ರೀ ಜನಾರ್ಧನ ದೇವಸ್ಥಾನ ಇದರ ಸಹಯೋಗದೊಂದಿಗೆ 48 ದಿನಗಳ ಉಚಿತ ಯೋಗಶಿಕ್ಷಣ ತರಗತಿ ಸೆ. 21 ರಿಂದ ಕೊಡಿಪಾಡಿ ಶ್ರೀ ಜನಾರ್ಧನ ದೇವಸ್ಥಾಬದಲ್ಲಿ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಪ್ರತಿದಿನ ಯೋಗ ತರಗತಿಗಳು ನಡೆಯಲಿದ್ದು, 10 ವರ್ಷ ಮೇಲ್ಪಟ್ಟವರು ತರಗತಿಯಲ್ಲಿ ಭಾಗವಹಿಸಬಹುದಾಗಿದೆ. ಈ ತರಗತಿಯಿಂದಾಗಿ ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಅನೇಕ ರೋಗಗಳಿಗೆ ಸೂಕ್ತ ಚಿಕಿತ್ಸಾ ಕ್ರಮ ನೀಡಿ ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ ಎಂದು ಎಸ್‌ಪಿವೈಎಸ್‌ಎಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here