ಕಾಲರಾ, ಸಾಂಕ್ರಾಮಿಕ ರೋಗ ಭೀತಿ…!-ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸಿವಂತೆ ನಗರಸಭೆ ಪ್ರಕಟಣೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಮತ್ತು ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಪುತ್ತೂರು ನಗರಸಭೆಯ ಸಾರ್ವಜನಿಕರು ತಮ್ಮ ಮನೆಯಲ್ಲಿ ದಿನಿನತ್ಯ ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸುವಂತೆ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.


ದಿನನಿತ್ಯ ಉಪಯೋಗಿಸುತ್ತಿರುವ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಉಪಯೋಗಿಸತಕ್ಕದ್ದು, ಉದ್ದಿಮೆದಾರರು ತಮ್ಮ ಹೊಟೇಲ್ ಮತ್ತು ವ್ಯಾಪಾರ ನಡೆಸುವ ಸ್ಥಳಗಳಲ್ಲಿ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಮತ್ತು ತಮ್ಮಲ್ಲಿ ವಿತರಿಸುವ ಆಹಾರ ಪದಾರ್ಥಗಳನ್ನು ಬಿಸಿ ನೀರಿನಲ್ಲಿ ಶುಚಿಗೊಳಿಸಿ ಆಹಾರ ವಿತರಿಸಲು ಪೌರಾಯುಕ್ತ ಮಧು ಎಸ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here