ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಮೇಘಾಲಯ ರಾಜ್ಯ ಸಹಕಾರ ಸಂಘದ ಅಧಿಕಾರಿಗಳು ಭೇಟಿ

0

ವಿಟ್ಲ: ನಬಾರ್ಡ್ ಮಂಗಳೂರು ಇದರ ಸಹಯೋಗದೊಂದಿಗೆ ಮೇಘಾಲಯ ರಾಜ್ಯ ಸಹಕಾರ ಸಂಘದ ಅಧಿಕಾರಿಗಳ ತಂಡ ಇತ್ತೀಚೆಗೆ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ನಬಾರ್ಡ್ ಎ. ಜಿ. ಯಂ. ಶಕ್ತಿ ಪ್ರಸನ್ನ ಮೊಹಪಾತ್ರ, ಇಡ್ಕಿದು ಸೇವಾಸಹಕಾರಿ ಸಂಘದ ಅಧ್ಯಕ್ಷರಾದ ಬಿ. ಸುಧಾಕರ್ ಶೆಟ್ಟಿ, ವೃತ್ತಿ ಪರ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಎಂ. ಪಡೀಲ್ ಮೈಕೆ, ಸಂಘದ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ, ಶಾಖಾಧಿಕಾರಿ ರವೀಂದ್ರನಾಥ ಮೇಲಾಂಟ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೇಘಾಲಯ ರಾಜ್ಯ ಸಹಕಾರ ಸಂಘದ ಅಧಿಕಾರಿಗಳು ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here