ಕೆದಂಬಾಡಿ ಬಿಜೆಪಿ ಬೂತ್ ಸಂಖ್ಯೆ 188 ಕ್ಕೆ ಆಯ್ಕೆ – ಅಧ್ಯಕ್ಷ: ಗಂಗಾಧರ ನಾಯ್ಕ, ಕಾರ್ಯದರ್ಶಿ: ಪ್ರಶಾಂತ್ ತ್ಯಾಗರಾಜನಗರ

0

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 188ರ ಸಭೆ ತಿಂಗಳಾಡಿಯಲ್ಲಿ ನಡೆಯಿತು.

ಸಭೆಯಲ್ಲಿ ಬೂತಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಗಂಗಾಧರ ನಾಯ್ಕ ಮುಳಿಗದ್ದೆ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ್ ತ್ಯಾಗರಾಜ ನಗರರವರುಗಳನ್ನು ಆಯ್ಕೆ ಮಾಡಲಾಯಿತು. ಬೂತಿನ ಮತಗಟ್ಟೆ ಏಜೆಂಟ್ ಆಗಿ ಭಾಸ್ಕರ ಬಲ್ಲಾಳ್, ಬಿಎಲ್‌ಎ ಟು ಆಗಿ ಎ. ಟಿ. ನಾರಾಯಣ, ಎಸ್. ಸಿ. ಸದಸ್ಯರಾಗಿ ಸುನಿಲ್ ತಿಂಗಳಾಡಿ, ಎಸ್ ಟಿ ಸದಸ್ಯರಾಗಿ ವಿನೋದ್ ಮಿತ್ರಂಪಾಡಿ, ಸದಸ್ಯರಾಗಿ ರವೀಂದ್ರ ನಿಡ್ಯಾಣ, ಅಶೋಕ ಮಜಲಮೂಲೆ ಹಾಗೂ ಸದಸ್ಯರಾಗಿ ಮೋನಪ್ಪ ನಾಯ್ಕ ಮುಳಿಗದ್ದೆ, ರಾಧ ತಿಂಗಳಾಡಿ, ಕೊರಗಪ್ಪ ಪೂಜಾರಿ, ಧನಂಜಯ ಗೌಡ, ಜೀವನ್ ಆಯ್ಕೆಯಾದರು. ಬೂತಿನ ಮನ್ ಕಿ ಬಾತ್ ವೀಕ್ಷಣೆ ಪ್ರಮುಖರಾಗಿ ಮೋಹನ್ ರಾಮನಗರ ಆಯ್ಕೆಯಾದರು.


ಸಭೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಸದಸ್ಯತ್ವ ಅಭಿಯಾನದ ಪುತ್ತೂರಿನ ಸಹ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಸಹಕಾರ ಭಾರತಿ ಪುತ್ತೂರು ಇದರ ಅಧ್ಯಕ್ಷರಾದ ಕೃಷ್ಣಕುಮಾರ್ ರೈ ಗುತ್ತು ಹಾಗೂ ಕೆದಂಬಾಡಿ ಶಕ್ತಿ ಕೇಂದ್ರದ ಬಿಜೆಪಿ ಪ್ರಮುಖರಾದ ಶರತ್ ಗೌಡ ಗುತ್ತು, ಹಿರಿಯ ಕಾರ್ಯಕರ್ತರು, ಪುತ್ತೂರು ಟಿಎಪಿಸಿಎಂಎಸ್ ನಿರ್ದೇಶಕ ಜಯರಾಮ ರೈ ಬಾಳಾಯ, ಬೂತಿನ ಮಾಜಿ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ, ಕೆದಂಬಾಡಿ ಕೆಯ್ಯೂರು ಕೃಷಿ ಪತ್ತಿನ ಮಾಜಿ ನಿರ್ದೇಶಕ ಸೂರ್ಯಪ್ರಸನ್ನ ರೈ, ಬೂತ್ ಮತಗಟ್ಟೆ ಏಜೆಂಟ್ ಗಣೇಶ ರೈ ಮಿತ್ರಂಪಾಡಿ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು. ಕೊರಗಪ್ಪ ಪೂಜಾರಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here