ನೆಲ್ಯಾಡಿ: ಜಾಗಕ್ಕೆ ಅಕ್ರಮ ಪ್ರವೇಶಿಸಿ ಹಲ್ಲೆ-ದೂರು

0

ನೆಲ್ಯಾಡಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೆಲ್ಯಾಡಿ ಗ್ರಾಮದ ಕಳಪ್ಪುರಯಿಲ್ ನಿವಾಸಿ ಆನಿ ಎಂ.ವಿ.ಮ್ಯಾಥ್ಯು ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಸೆ.28ರಂದು ಕಳಪ್ಪುರಯಿಲ್ ಎಂಬಲ್ಲಿರುವ ಜಾಗದಲ್ಲಿ ಕಲ್ಲು ಕಂಬಗಳನ್ನು ಹಾಕಿ ಬೇಲಿ ಮಾಡುತ್ತಿದ್ದಾಗ ತಾರನಾಥ, ಪದ್ಮನಾಭ ಮತ್ತು ವಸಂತ ಸಾಲಿಯಾನ್ ಎಂಬವರು ಅಕ್ರಮ ಪ್ರವೇಶ ಮಾಡಿದ್ದು, ಈ ಬಗ್ಗೆ ಆಕ್ಷೇಪಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಪೈಕಿ ವಸಂತ ಸಾಲಿಯಾನ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಈ ಬಗ್ಗೆ ಆನಿ ಎಂ.ವಿ.ಮ್ಯಾಥ್ಯು ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣಾ ಅ.ಕ್ರ: 112/2024 ಕಲಂ: 329(3), 115(2), 352, 351(3) ಜೊತೆಗೆ 3(5)BNS 2023ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here