ಮಾಂತೂರು ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಮಹಾಸಭೆ

0

ಅಧ್ಯಕ್ಷರಾಗಿ ರಫೀಕ್ ಎಂ.ಎ, ಪ್ರ.ಕಾರ್ಯದರ್ಶಿಯಾಗಿ ಅಝೀಝ್ ಕುರ್ತಲ

ಪುತ್ತೂರು: ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಮಾಂತೂರು ಇದರ 25ನೇ ವಾರ್ಷಿಕ ಮಹಾಸಭೆ ಗೌರವಾದ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ ಅಧ್ಯಕ್ಷತೆಯಲ್ಲಿ ನಡೆಯಿತು. ಅಬೂಬಕ್ಕರ್ ಸಿದ್ದೀಕ್ ಮಸ್ಲಿಯಾರ್ ದುವಾಶಿರ್ವಚನದೊಂದಿಗೆ ಉದ್ಘಾಟಿಸಿದರು


ಅತಿಥಿಗಳಾಗಿದ್ದ ಈಡನ್ ಗ್ಲೋಬಲ್ ಸ್ಕೂಲ್‌ನ ಟ್ರಸ್ಟಿ ಅಬ್ದುಲ್ ಖಾದರ್ ಹಾಜಿ ಸಹಲ್, ಎಸ್.ಇ ಅಬ್ದುಲ್ಲ ಸಭೆಯನ್ನುದ್ದೇಶಿಸಿ ಮಾತಾಡಿದರು. ಅಶ್ರಫ್ ಬಿ ಸಿ, ರಫೀಕ್ ಕೆನರ, ಗೌರವ ಸಲಹೆಗಾರರಾದ ಉಮ್ಮರ್ ಸೋಂಪಾಡಿ, ಅಲ್ ನೂರ್ ಅಧ್ಯಕ್ಷ ಝಕರಿಯಾ ಮಾಂತೂರು, ಅಬ್ದುಲ್ ಕರೀಂ ಮೌಲ ಉಪಸ್ಥಿತರಿದ್ದರು. ಮುಹಮ್ಮದ್ ಅಶ್ರಫ್ ಬಾಖವಿ ನೇತೃತ್ವದಲ್ಲಿ ಮೌಲೀದ್ ಮಜ್ಲೀಸ್ ಹಾಗೂ ಸ್ಥಳೀಯ ಮದರಸ ಅಧ್ಯಾಪಕರಿಗೆ ಗೌರವ ಸಮರ್ಪಣೆ ನಡೆಯಿತು. ಚಾಪಲ್ಲ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ರಫೀಕ್ ಎಂ.ಎ ಹಾಗೂ ಪ್ರ.ಕಾರ್ಯದರ್ಶಿಯಾಗಿ ಅಝೀಝ್ ಕುರ್ತಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಶೀರ್ ಕೆನರಾ, ಕೋಶಾಧಿಕಾರಿಯಾಗಿ ಸಮೀರ್ ಅತಿಕರೆ, ಜೊತೆ ಕಾರ್ಯದರ್ಶಿಯಾಗಿ ಕಲಂದರ್ ಬಸ್ತಿಮೂಲೆ, ಸಂಘಟನಾ ಕಾರ್ಯದರ್ಶಿಯಾಗಿ ರಫೀಕ್ ಎಂ ಎಸ್ ಆಯ್ಕೆಯಾದರು.ಸಮಿತಿ ಸದಸ್ಯರುಗಳಾಗಿ ಝಕಾರಿಯ ಮಾಂತೂರು, ರಫೀಕ್ ಸೋಂಪಾಡಿ, ನಝೀರ್ ಮುಂಡತ್ತಡ್ಕ, ಇಕ್ಬಾಲ್ ಕೆನರಾ, ಹಾರಿಸ್ ಮಾಂತೂರು, ಸಲೀಂ ಯು.ಎಸ್,ಹಮೀದ್ ಸೋಂಪಾಡಿ, ಕಾಸಿಂ ಮಾಂತೂರು, ಖಲೀಲ್ ಮಾಂತೂರುರವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಸಲೀಂ ಯು.ಎಸ್ ವರದಿ ವಾಚಿಸಿದರು. ಅಧ್ಯಕ್ಷ ರಫೀಕ್ ಸೋಂಪಾಡಿ ಸ್ವಾಗತಿಸಿದರು. ರಫೀಕ್ ಎಂ.ಎಸ್ ವಂದಿಸಿದರು. ಕಲಂದರ್ ಬಸ್ತಿಮೂಲೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here