ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷೀ ವೆಂಕಟರಮಣ ದೇವಾಲಯದಲ್ಲಿ ಭಕ್ತರಿಗೆ ತೆನೆ ವಿತರಣೆ ಕಾರ್ಯಕ್ರಮ ಜರಗಿತು.
ದೇವಾಲಯದ ಆಡಳಿತ ಮಂಡಳಿ ಸ್ವಯಂ ಮುತುವರ್ಜಿವಹಿಸಿ ದೇವಾಲಯದ ರಾಜಂಗಣದಲ್ಲಿ ಭತ್ತದ ನಾಟಿ ಮಾಡಿ, ಅಲ್ಲಿ ಬೆಳೆದ ತೆನೆಯನ್ನು ಕಟಾವು ಮಾಡಿ ಅದಕ್ಕೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಿತರಿಸಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್ ಸಹಿತ ಭಕ್ತಾಧಿಗಳು ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ರವೀಂದ್ರ ಭಟ್ ಹಾಗೂ ಸುಬ್ರಹ್ಮಣ್ಯ ಭಟ್ ನೇರವೇರಿಸಿದರು.