ಮಾನಸಿಕ ಅಸ್ವಸ್ಥತೆಯಿಂದ ಗುಣಮುಖರಾದ ಕೋಲ್ಪೆಯ ಕಮಲ ನೆರಿಯ ಆಶ್ರಮಕ್ಕೆ

0

ಪುತ್ತೂರು: ಮಾನಸಿಕ ಅಸ್ವಸ್ಥತೆಯಿಂದ ಮಂಜೇಶ್ವರ ದೈಗೊಳಿ ಸೇವಾಶ್ರಮದಲ್ಲಿದ್ದ ಕೋಲ್ಪೆ ನಿವಾಸಿ ಅನಾಥೆ ಕಮಲ ಅವರು ಗುಣಮುಖರಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ನೆರಿಯ ಆಶ್ರಮಕ್ಕೆ ದಾಖಲಿಸಲಾಗಿದೆ.


2 ತಿಂಗಳ ಹಿಂದೆ ಮಾನಸಿಕ ಅಸ್ವಸ್ಥರಾಗಿದ್ದ ಹಿನ್ನಲೆಯಲ್ಲಿ ಕಮಲ ಅವರನ್ನು ದೈಗೊಳಿ ಸೇವಾಶ್ರಮಕ್ಕೆ ದಾಖಲಿಸಲಾಗಿತ್ತು. ಸದ್ಯ ಅವರು ಗುಣಮುಖರಾಗಿರುವ ಹಿನ್ನಲೆಯಲ್ಲಿ ನೆರಿಯ ಆಶ್ರಮಕ್ಕೆ ದಾಖಲಿಸಲಾಗಿದೆ. ಪುತ್ತೂರು ರೋಟರಿ ಕ್ಲಬ್ ನ ಉಮೇಶ್ ನಾಯಕ್ ಅವರ ಸಹಕಾರದೊಂದಿಗೆ ಇಡ್ಕಿದು ಗ್ರಾ.ಪಂ ಸದಸ್ಯ ಪುರುಷೋತ್ತಮ ಕೋಲ್ಪೆ ನೇತೃತ್ವದಲ್ಲಿ ಕೊಂಕೋಡಿ ಸುಬ್ರಾಯ ಭಟ್ ದಂಪತಿಯವರ ನೆರವಿನಿಂದ ಈ ಹಿಂದೆ ದೈಗೊಳಿ ಸೇವಾಶ್ರಮಕ್ಕೆ ಸೇರಿಸಲಾಗಿತ್ತು. ಕಮಲ ಅವರು ಸದ್ಯ ಸಂಪೂರ್ಣ ಗುಣಮುಖರಾಗಿದ್ದು, ಮತ್ತೆ ರೋಗ ಲಕ್ಷಣಗಳು ಬಾಧಿಸದೆ ಇರುವಂತೆ ಸೂಕ್ತ ಸಮಯದಲ್ಲಿ ಔಷಧಿಗಳನ್ನು ನೀಡಬೇಕಾಗಿರುವುದರಿಂದ ಅನಾಥೆಯಾಗಿರುವ ಕಮಲ ಅವರನ್ನು ಇದೇ ತಂಡ ಸೂಕ್ತ ದಾಖಲೆಗಳೊಂದಿಗೆ ನೆರಿಯ ಸೇವಾಶ್ರಮಕ್ಕೆ ದಾಖಲಿಸಿದೆ.

LEAVE A REPLY

Please enter your comment!
Please enter your name here