ಅಗ್ನಿವೀರ್ ಆಯ್ಕೆಯಾದ ವಿಜೇತ್ ಮಜ್ಜಾರ್ ಅವರಿಗೆ ಬಿಜೆಪಿ ಯುವ ಮೋರ್ಚಾದಿಂದ ಸನ್ಮಾನ

0

ಪುತ್ತೂರು: ಭಾರತೀಯ ಸೇನೆಗೆ ಅಗ್ನಿ ವೀರ್ ಆಗಿ ಆಯ್ಕೆಯಾಗಿ ದೇಶಸೇವೆಗೆ ತೆರಳುತ್ತಿರುವ ವಿಜೇತ್ ಮಜ್ಜಾರ್ ರವರನ್ನು ಬಿಜೆಪಿ ಯುವ ಮೋರ್ಚಾ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಪ್ರಭಾರಿ ರತನ್ ರೈ ಕುಂಬ್ರಯವರು ಪ್ರಧಾನಮಂತ್ರಿ ಯವರು ಅಗ್ನಿಪಥ್ ಸೇನಾ ಸೇರಲು ಯುವಕರಿಗೆ ಅವಕಾಶ ಮಾಡಿಕೊಟ್ಟಿದಾರೆ, ಆ ಮೂಲಕ ದೇಶ ಸೇವೆ ಮಾಡಲು ನಮ್ಮ ಊರಿನ ಪ್ರತಿಭೆಗೆ ಅವಕಾಶ ದೊರೆತಿದೆ ಎಂದರು.
ಯುವ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿಶಿರ್ ಪೆರ್ವೋಡಿ ಇವರು ಗೌರಾರ್ಪಣೆ ಸಲ್ಲಿಸಿದರು. ನೆಟ್ಟಣಿಗೆ ಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುoಜ, ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಸುದರ್ಶನ್ ರೈ, ಕೆದಂಬಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಶರತ್ ಗುತ್ತು, ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಮಯೂರ, ವಾರ್ಡ್ ಕಾರ್ಯದರ್ಶಿ ಪ್ರಸಾದ್ ಮಡಿವಾಳ ಕೋಡಿಯಡ್ಕ, ಪ್ರಮುಖರಾದ ಚಿರಾಗ್ ರೈ, ಕೀರ್ತನ್, ತಿಮಪ್ಪ ಪೂಜಾರಿ, ಮಜ್ಜಾರ್, ಲೋಕನಾಥ್ ಪೂಜಾರಿ ಮಜ್ಜಾರ್, ವಿಜೇತ್ ರವರ ತಾಯಿ ಹಾಗೂ ಕುಟುಂಬಸ್ಥರು ಉಪಸಿತರಿದ್ದರು ಈ ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಯುವರಾಜ್ ಪೂಂಜಾ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here