ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ‘ಶಾರದಾ ಪೂಜಾ’ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಾರದಾ ಪೂಜೆಯನ್ನು ಅಕ್ಟೋಬರ್ 3ರಂದು ಹಮ್ಮಿಕೊಳ್ಳಲಾಯಿತು.

ಶ್ರೀ ಆಶ್ಲೇಷ ಭಟ್ ಪುರೋಹಿತರ ನೇತೃತ್ವದಲ್ಲಿ ನಡೆಸಲಾದ ಪೂಜೆಯಲ್ಲಿ, ವಿದ್ಯಾದೇವತೆಯಾದ ಸರಸ್ವತಿಯ ಪೂರ್ಣಾನುಗ್ರಹವು ದೊರೆತು ವಿದ್ಯಾರ್ಥಿಗಳ ಅಂತ:ಶಕ್ತಿಯು ಪ್ರಜ್ವಲಿಸುವಂತಾಗಲಿ ಎಂಬ ಆಶಯದೊಂದಿಗೆ ಪ್ರಾರ್ಥಿಸಲಾಯಿತು.

ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ನಡೆಯಿತು. ವಿದ್ಯಾರ್ಥಿಗಳು ವಿವಿಧ ಭಜನೆಗಳನ್ನು ಹಾಡಿದರು. ಕಿಂಡರ್ ಗಾರ್ಟನ್ ಮಕ್ಕಳ ಹುಲಿವೇಷವು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಭರತ್ ಪೈ , ಸದಸ್ಯರಾದ ಶಂಕರಿ ಶರ್ಮ, ಪ್ರಾಂಶುಪಾಲ ಸಿಂಧು ವಿ. ಜಿ , ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here