ಮಂಗಳೂರು ದಸರಾದಲ್ಲಿ ಮನರಂಜಿಸಿದ ಪುತ್ತೂರಿನ ಸೋನಿಕಾ ಜನಾರ್ದನ್ ತಂಡದ ಭಕ್ತಿ ಸಂಗೀತ ಕಾರ್ಯಕ್ರಮ

0

ಪುತ್ತೂರು: ಮಂಗಳೂರು ದಸರಾ ಸಂಭ್ರಮದ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಅ.5 ರಂದು ಸಂಜೆ 6 ರಿಂದ 7 ಗಂಟೆಯ ವರೆಗೆ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸರಕಾರಿ ಸಹಾಯಕ ಅಭಿಯೋಜಕರಾದ ಜನಾರ್ದನ್ ಬಿ.ಪುತ್ತೂರುರವರ ಪುತ್ರಿ ಸೋನಿಕ ಜನಾರ್ದನ್ ಮತ್ತು ಬಳಗದವರು ನಡೆಸಿಕೊಟ್ಟರು.

ಗಾಯನದಲ್ಲಿ ಸೋನಿಕ ಜನಾರ್ದನ್, ಅಶ್ಮಿತ್ ಎ.ಜೆ ಸಹಕರಿಸಿದ್ದರು. ಹಿನ್ನೆಲೆ ಸಂಗೀತದಲ್ಲಿ ಶಿವಾನಂದ ಉಪ್ಪಳ (ಕೀಬೋರ್ಡ್) ಜಗದೀಶ್ ಮಂಗಲ್ಪಾಡಿ (ತಬಲ ) ಜಯಶಂಕರ್ ಪುಣಚ ( ರಿಥಮ್ ಪ್ಯಾಡ್) ಸಹಕರಿಸಿದರು. ವಿ.ಜೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಅವರು ಸೋನಿಕಾ ಜನಾರ್ದನ್ ರವರನ್ನು ಸನ್ಮಾನಿಸಿ ಗೌರವಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ರವಿಶಂಕರ್ ಮಿಜಾರ್, ರಾಮನಾಥ್ ಕಾರಂದೂರ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here