ಮಧು ಎಸ್.ಮನೋಹ‌ರ್ ಅವರಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದನೆ

0

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಪುತ್ತೂರು ನಗರದ ಪೌರಾಯುಕ್ತರಿಗೆ ಅಭಿನಂದನೆ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ದೆಹಲಿ ವಿಜ್ಞಾನ ಭವನದಲ್ಲಿ ಅಕ್ಟೋಬರ್ 2 ರಂದು ನಡೆದ ಸ್ವಚ್ಛ ಭಾರತ್ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರದಾನ ಮಂತ್ರಿಗಳ ಉಪಸ್ಥಿತಿಯಲ್ಲಿ ಕರ್ನಾಟಕದ ಹಾಗೂ ಪುತ್ತೂರಿನ ಸ್ವಚ್ಛತೆಯ ಕುರಿತು ಪ್ರಸ್ತಾಪ ಮಾಡಿ ಪುತ್ತೂರಿನ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಗುರುತಿಸಿದ ನಗರಸಭೆಯ ಪೌರಾಯುಕ್ತರು ಶ್ರೀ ಮಧು ಎಸ್ ಮನೋಹರ್ ಅವರಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ವರ್ತಕ ಸಂಘದ ಅಧ್ಯಕ್ಷರು ಪಿ ವಾಮನ್ ಪೈ ಮಾತನಾಡಿ ತಮ್ಮ ಸೇವೆಯನ್ನು ಪುತ್ತೂರಿನ ಜನತೆಗೆ ಇನ್ನಷ್ಟು ಸಿಗಲಿ ಹಾಗೆನೇ ಸ್ವಚ್ಛತಗು ಹಾಗೂ ನಗರದ ಅಭಿವೃದ್ಧಿಗು ತಮಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ಣ ಸಹಕಾರ ನೇಡುತ್ತೇನೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ, ಟಿವಿ ಮನೋಜ್, ಖಜಾಂಜಿ ಉಲ್ಲಾಸ್ ಪೈ, ದಿನೇಶ್ ಭಟ್, ಮುಹಮ್ಮದ್ ಸಾಹಿಬ್ ಕೂರ್ನಡ್ಕ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here