ಕೌಡಿಚ್ಚಾರ್‌ ಬೈಕ್‌ ಕಾರು ಅಪಘಾತ- ಗಾಯ

0

ಪುತ್ತೂರು: ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್‌ ಪಲ್ಲದ ಕೆರೆಯ ಬಳಿ ಕಾರು ಮತ್ತು ಬೈಕ್‌ ನಡುವೆ ಡಿಕ್ಕಿಯಾದ ಘಟನೆ ಅ.8ರಂದು ನಡೆದಿದೆ. ಘಟನೆಯಲ್ಲಿ ಬೈಕ್‌ ಸವಾರನಿಗೆ ಗಾಯವಾಗಿದೆ.


ಮೊಟಾರ್‌ ಬೈಕ್‌ ನಲ್ಲಿ ಚಾಲಕ ಹರ್ಷಿತ್‌,ಹಿಂಬದಿ ಸವಾರ ಅಜಯ್‌ ಅವರು ಇದ್ದ ವಾಹನಕ್ಕೆ ಎದುರಿನಿಂದ ಬಂದ ಹರೀಶ್‌ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರರು ಬಿದ್ದಿದ್ದಾರೆ.

ಬುಜಕ್ಕೆ, ತಲೆಗೆ ಪೆಟ್ಟಾಗಿದ್ದು,ಕೂಡಲೇ ಸ್ಥಳೀಯರು ಧಾವಿಸಿ ಉಪಚರಿಸಿ ಚಿಕತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here