ಕರ್ನಾಟಕ ಗಮಕ ಕಲಾ ಪರಿಷತ್ ದ.ಕ. ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ

0

ಪುತ್ತೂರು: ನವರಾತ್ರಿ ಉತ್ಸವದ ಸಲುವಾಗಿ ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆದ 90ನೇ ವರ್ಷದ ಶಾರದೋತ್ಸವದ ಅಂಗವಾಗಿ ಅ.4ರಂದು ಕುಶಲ ಹಾಸ್ಯ ಪ್ರಿಯರ ಸದಸ್ಯರಿಂದ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದಿಂದ ಆಯ್ದ “ಉತ್ತರನ ಪೌರುಷ” ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕ ಕಲಾ ಪರಿಷತ್ತಿನ ಸದಸ್ಯರಾದ ಗಮಕಿ ಜಯಲಕ್ಷ್ಮಿ ವಿ.ಭಟ್ ಗಮಕವನ್ನು ವಾಚಿಸಿದರು ಹಾಗೂ ಸದಸ್ಯೆ ಪದ್ಮಾ ಕೆ.ಆರ್ ಆಚಾರ್ಯ ಮತ್ತು ಕಾರ್ಯದರ್ಶಿ ಶಂಕರಿ ಶರ್ಮ ಗಮಕ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆದ್ದಿತು.

LEAVE A REPLY

Please enter your comment!
Please enter your name here