ಉಪ್ಪಿನಂಗಡಿ: ಇಲ್ಲಿನ ರಥಬೀದಿ ನಿವಾಸಿ, ಉದ್ಯಮಿ ನೇಜಿಕಾರ್ ಯಶವಂತ ಪೈ (71) ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಹಿಂದೆ ರಥಬೀದಿಯಲ್ಲಿ ವಸಂತ್ ಮಹಲ್ ಹೊಟೇಲ್ ನಡೆಸುತ್ತಿದ್ದ ಇವರು, ಬಳಿಕ ಹೊಟೇಲ್ ಉದ್ಯಮವನ್ನು ಬಿಟ್ಟರಾದರೂ ವಸಂತ್ ಮಹಲ್ ಯಶವಂತ ಪೈ ಎಂದೇ ಚಿರಪರಿಚಿತರಾಗಿದ್ದರು. ಹೋಟೇಲ್ ಉದ್ಯಮಿಯಾಗಿ, ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ, ಟಿಂಬರ್ ಮರ್ಚೆಂಟ್ ಆಗಿ ಬಹು ಆಯಾಮದಲ್ಲಿ ಉದ್ಯಮ ಕ್ಷೇತ್ರವನ್ನು ಮುನ್ನಡೆಸಿದ ಇವರು ಉಪ್ಪಿನಂಗಡಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಜನ್ಮಾಷ್ಠಮಿ ಉತ್ಸವನ್ನು ಜನಾಕರ್ಷಣಾ ಉತ್ಸವವಾಗಿ ಪರಿವರ್ತಿಸಿ ಗಮನ ಸೆಳೆದಿದ್ದರು.
ಪ್ರಸಕ್ತ ಮೊಸರು ಕುಡಿಕೆ ಉತ್ಸವ ಸಮಿತಿಯ ಗೌರವಾಧ್ಯಕ್ಷರು ಆಗಿದ್ದು, 34ನೇ ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠ ಟ್ರಸ್ಟಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ತಬಲಾ ವಾದಕರಾಗಿ ಸಂಗೀತ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಇವರು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಟ್ಯಾಡಿ ಸಹಿತ ಹಲವು ಗಣ್ಯರು ಮೃತರ ಅಂತಿಮ ದರ್ಶನ ಗೈದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.