ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಂದ ಕರಸೇವೆ- ಕೇಸರಿ ಶಲ್ಯ ನೀಡುವ ಮೂಲಕ ಚಾಲನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಅಭಿವೃದ್ದಿಗಾಗಿ ಭಕ್ತರಿಂದ ಕರಸೇವೆ ಹಮ್ಮಿಕೊಂಡಿದ್ದು, ಕೇಸರಿ ಶಲ್ಯ ನೀಡಿ ಚಾಲನೆ ನೀಡಲಾಯಿತು.

ಡಾ. ಸುರೇಶ ಪುತ್ತೂರಾಯ ಅವರು ಕೇಸರಿ ಶಲ್ಯವನ್ನು ಭಕ್ತರಿಗೆ ವಿತರಿಸಿದರು. ಶಾಸಕ ಅಶೋಕ್ ಕುಮಾರ್ ರೈ ಕರಸೇವೆಗೆ ಚಾಲನೆ ನೀಡಿದರು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತ ಸದಸ್ಯರು ಹಾಗು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here