ಫೆ.16ಕ್ಕೆ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ -2025 : ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ

0

ಪುತ್ತೂರು: ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬಡಾವಣೆಗಳನ್ನು ಮತ್ತು ಮನೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿರುವ ಜೊತೆಗೆ ಹಿರಿಯ ನಾಗರಿಕರಿಗೂ ವಿಶೇಷ ಬಡವಾವಣೆಗಳನ್ನು ನಿರ್ಮಿಸಿ ಅಭಿವೃದ್ದಿ ಪಡಿಸುತ್ತಿರುವ ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ 5ನೇ ವರ್ಷದ ದ್ವಾರಕೋತ್ಸವ ಫೆ.16ರಂದು ಪುತ್ತೂರು ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ.


ದ್ವಾರಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಮ್ಮ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ಮೂಲಕ ವಿವಿಧ ಬಗೆ ವೈದಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ಯಕ್ಷಗಾನ, ಸಂಗೀತ, ಗೋಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲಿಸುತ್ತಾ ಬದಿದ್ದೇವೆ. ವೇದ ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಸಾಹಿತ್ಯ ಅಧ್ಯಯನ, ನವೀನ ಜನಾಂಗದಲ್ಲಿ ಮುಂದುವರಿಯಲೆಂಬ ಆಶಯ ನಮ್ಮಲ್ಲಿದೆ. ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಅನುಷ್ಠಾನ ಮತ್ತು ಸಂವರ್ಧನೆ ನಮ್ಮ ಧ್ಯೇಯವಾಗಿದೆ. ಆರ್ತಿಕ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಾನು ನಮ್ಮ ಆದಾಯದ ಒಂದಷ್ಟು ಭಾಗವನ್ನು ಇಂತಹ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುತ್ತಿದ್ದೇವೆ ಎಂದ ಅವರು ಈ ಸಂದರ್ಭ ಫೆ. 16ಕ್ಕೆ 5ನೇ ವರ್ಷದ ದ್ವಾರಕೋತ್ಸವ ಎಂಬ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಹೇಳಿದರು.


ಕಾರ್ಯಕ್ರಮಗಳ ವಿವರ:
ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಭಟ್ ಕುಂಬ್ಳೆ ಅವರು ಮಾತನಾಡಿ, ಕಾರ್ಯಕ್ರಮವನ್ನು ಬೆಳಗ್ಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರು ಉದ್ಘಾಟಿಸಲಿದ್ದಾರೆ. ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಕ್ಕಳ ತಜ್ಞೆ ಡಾ. ಸುಲೇಖಾ ವರದರಾಜ್, ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸುಬ್ರಹ್ಮಣ್ಯ ಪ್ರಸಾದ ಭಟ್ ನೆಕ್ಕರಕಳೆಯ, ಭಾರತೀಯ ಸೇನೆ ಮತ್ತು ಕೃಷಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ. ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನದ ಹಿಮ್ಮೇಳದಾರಿ ಪದ್ಯಾಣ ಶಂಕರನಾರಾಯಣ ಭಟ್ , ವೈಜ್ಞಾನಿಕ ಸಂಶೋಧಕ ಸ್ವಸ್ತಿಕ್ ಪದ್ಮ ಮುರ್ಗಜೆ, ಸಾಮಾಜಿಕ ಜಾಲತಾಣ ಮತ್ತು ಆಹಾರೋದ್ಯಮದ ಕುರಿತು ಪ್ರಸಾರ ಮಾಡುತ್ತಿರುವ ಭಟ್ ಆಂಡ್ ಭಟ್‌ನ ಸುದರ್ಶನ ಭಟ್ ಬೆದ್ರೊಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.


ಹೊಸ ಪುಸ್ತಕಗಳ ಬಿಡುಗಡೆ:
ದ್ವಾರಕಾ ಪ್ರಕಾಶನದ ಮೂಲಕ ಹೊರ ಬಂದಿರುವ ಹೊಸ ಪುಸ್ತಕಗಳ ಬಿಡುಗಡೆ ಸಮಾಂಭದಲ್ಲಿ ವಿದ್ವಾನ್ ಗ.ನಾ ಭಟ್ ಮೈಸೂರು ಅವರ ಕೃತಿ ಸತೀ ಸಾವಿತ್ರಿ ಕಾದಂಬರಿ ಮತ್ತು ಕೃಷ್ಣಮೂರ್ತಿ ಕೆಮ್ಮಾರ ಅವರ ಕೃತಿ ಪುರಾಣ ರಸಪ್ರಶ್ನಾವಲಿಯನ್ನು ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್ ಜಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವೇ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ ಅವರ ಕೃತಿ ವೇದವಸಂತ ಮತ್ತು ವೇದಮಾಧವ ಎಂಬ ಕೃತಿಯ ಬಿಡುಗಡೆ ನಡೆಯಲಿದೆ. ನರಿಮೊಗರು ಸರಸ್ವತಿ ವಿದ್ಯಾಮಂದಿರ ಅಧ್ಯಕ್ಷ ಅವಿನಾಶ ಕೊಡಂಕಿರಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ, ಯುವ ಬರಹಗಾರ ಉಪ್ಪಿನಂಗಡಿಯ ನವೀನಕೃಷ್ಣ ಎಸ್ ಅವರು ಕೃತಿ ಪರಿಚಯ ಮಾಡಲಿದ್ದಾರೆ ಎಂದು ಗಣರಾಜ ಭಟ್ ಕುಂಬ್ಳೆ ಹೇಳಿದರು.


ಕೃಷಿ, ಆರ್ಥಿಕ ವಿಚಾರಗೋಷ್ಠಿ:
ಬೆಳಿಗ್ಗೆ ಗಂಟೆ 11.30ಕ್ಕೆ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯಲ್ಲಿ ಗೋಪಾಲಕೃಷ್ಣ ಕಾಂಚೋಡು ಮತ್ತು ವಿಶ್ವೇಶ್ವರ ಭಟ್ ಬಂಗಾರಡ್ಕ ಹಾಗು ಸುಬ್ರಹ್ಮಣ್ಯ ಪ್ರಸಾದ ಭಟ್ ನೆಕ್ಕರಕಳೆಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗಣರಾಜ ಭಟ್ ಕುಂಬ್ಳೆ ಮಾಹಿತಿ ನೀಡಿದರು.


ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಗಂಟೆ 1 ರಿಂದ ಬಾಬು ಕಾಟುಕುಕ್ಕೆ ಮತ್ತು ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಕಿಬೋರ್ಡ್ ವಾದನ, ಮಧಾಹ್ನ ಗಂಟೆ 2 ರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ಚೂಡಾಮಣಿ ನಡೆಯಲಿದೆ. ಸಂಜೆ ಗಂಟೆ 4 ರಿಂದ ವಿದ್ವಾನ್ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ ಭಾವಗಾನಲಹರಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6 ರಿಂದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಶಿಷ್ಯರಿಂದ ಮಧುರಾಕೃತಿ -ಶ್ರೀಕೃಷ್ಣ ಲೀಲೆಗಳು ಎಂಬ ಭರತನಾಟ್ಯ ನೃತ್ಯಪ್ರದರ್ಶನ ನಡೆಯಲಿದೆ ಎಂದು ಗಣರಾಜ ಭಟ್ ಕುಂಬ್ಳೆ ಹೆಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿಬ್ಬಂದಿ ದುರ್ಗಾಗಣೇಶ್ ಉಪಸ್ಥಿತರಿದ್ದರು.

ಸೈಟ್‌ಗಳ ಮೇಲೆ ಶೇ.10 ರಿಯಾಯಿತಿ
ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧ್ಯೇಯವಾಕ್ಯದೊಂದಿಗೆ ಮನೆಗಳನ್ನು ಕಟ್ಟಿಕೊಡುತ್ತಾ ಬಡವಾಣೆಗಳನ್ನು ನಿರ್ಮಿಸಿ ಸೈಟ್‌ಗಳನ್ನು ಕೊಡುತ್ತಾ ಬಂದಿದ್ದೇವೆ. ಸಾವಿರಾರು ಮಂದಿ ನಮ್ಮ ಗ್ರಾಹಕರನ್ನು ಸೇರಿಸಿಕೊಂಡು ವಾರ್ಷಿಕೋತ್ಸವ ಹಮ್ಮಿಕೊಂಡಿರುವ ಸಂದರ್ಭದಲ್ಲಿ ನಾವು ವಿಶೇಷ ಆಕರ್ಷಣೆಯಾಗಿ ನಮ್ಮೆಲ್ಲ ಸೈಟ್‌ಗಳ ಮೇಲೆ ಬುಕ್ ಮಾಡುವವರಿಗೆ ಶೇ.10 ರಿಯಾಯಿತಿಯನ್ನು ದ್ವಾರಕೋತ್ಸವದ ಪ್ರಯುಕ್ತ ಇಡಲಾಗಿದೆ. ಮುಂದೆ ಬುಕ್ ಮಾಡುವವರಿಗೂ ರೂ.10ಸಾವಿರದ ಗಿಫ್ಟ್ ಕೂಪನ್ ಕೂಡಾ ನೀಡುತ್ತೇವೆ. ಎಲ್ಲರು ಇದರ ಸದುಪಯೋಗ ಪಡೆಯುವಂತೆ ವಿನಂತಿ
ಅಮೃತಕೃಷ್ಣ, ನಿರ್ದೇಶಕರು ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿ

ದಿನಪೂರ್ತಿ ಕಾರ್ಯಕ್ರಮ
ದ್ವಾರಕೋತ್ಸವ ಕಾರ್ಯಕ್ರಮವು ಸಾಮಾಜಿಕವಾಗಿ ಎಲ್ಲಾ ವರ್ಗದ ಜನರನ್ನು ಒಂದು ಸೂರಿನಡಿ ನೋಡುವ ಸರ್ವರನ್ನು ಸ್ನೇಹ ಭಾವದಿಂದ ಕಾಣುವ ಒಂದು ಗೂಡುವ ಸವಿ ಹಂಚುವ ಒಂದು ಸಂದರ್ಭ. ಈ ಸಂದರ್ಭ ವಾರ್ಷಿಕ ಕಾರ್ಯಕ್ರಮಗಳ ಪುನರವಲೋಕನ. ಸನ್ಮಾನ, ಪ್ರತಿಭಾ ಪುರಸ್ಕಾರ, ದ್ವಾರಕಾ ಪ್ರಕಾಶನದಿಂದ ಹೊಸ ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ. ಸಾಂಸ್ಕೃತಿಕ ಕಾರ್ಯಕ್ರಮ ಒಟ್ಟು ದಿನಪೂರ್ತಿ ಕಾರ್ಯಕ್ರಮ ನಡೆಯಲಿದೆ.
ಗೋಪಾಲಕೃಷ್ಣ ಭಟ್ ಅಧ್ಯಕ್ಷರು ದ್ವಾರಕಾ ಪ್ರತಿಷ್ಠಾನ

LEAVE A REPLY

Please enter your comment!
Please enter your name here