ಪುತ್ತೂರು:ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಲುವಾಗಿ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಜ್ಞಾನ ಸಂಬಂಧಿತ ವಿಚಾರಗಳಲ್ಲಿ ಫೆಬ್ರವರಿ 28 ರಂದು ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 12 ವಿದ್ಯಾರ್ಥಿಗಳ ತಂಡವು ಭಾಗವಹಿಸಿ “ಪ್ರಥಮ ಸಮಗ್ರ ಪ್ರಶಸ್ತಿ” ಯನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವ ಸಲುವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಗಳ ಪೇಪರ್ ಪ್ರೆಸೆಂಟೇಷನ್ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯಾದ ನಿಲಿಷ್ಕಾ.ಕೆ ( ದಿನೇಶ್ ನಾಯ್ಕಕೆ.ಜಿ ಮತ್ತು ಸ್ಮಿತಾಶ್ರೀ ಬಿ ದಂಪತಿ ಪುತ್ರಿ ) ಮತ್ತು 8ನೇ ತರಗತಿಯ ವಿದ್ಯಾರ್ಥಿನಿಯಾದ ಅವನಿ (ಡಾ.ವಿಘ್ನೇಶ್ವರ ಭಟ್ ಮತ್ತು ಸುಪರ್ಣ. ಕೆ ದಂಪತಿ ಪುತ್ರಿ) ಇವರ ತಂಡವು ಹಾಗೂ ಸರ್ಕ್ಯೂಟ್ ಕ್ರಾಫ್ಟ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಶುಭನ್ ( ಪದ್ಮನಾಭ ಮತ್ತು ರೇಖ ದಂಪತಿ ಪುತ್ರ) ಮತ್ತು ಕ್ಷಮಿತ್ ಜೈನ್( ಹನೀಶ್ ಜೈನ್ ಮತ್ತು ಶ್ರುತಿ ಜೈನ್ ದಂಪತಿ ಪುತ್ರ)ಇವರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.