ನೆಲ್ಯಾಡಿ: ಮಾ.20 ಮತ್ತು 21ರಂದು ನಡೆಯುವ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 12ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವಕ್ಕೆ ಗೊನೆ ಮುಹೂರ್ತ ಮಾ.14ರಂದು ನಡೆಯಿತು.
ಅರ್ಚಕರಾದ ಸುಕುಮಾರ ಯಡಪಡಿತ್ತಾಯ ಕೊಕ್ಕಡ ಅವರು ಗೊನೆ ಮುಹೂರ್ತ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕಡೆಂಬಿಲ, ಕಾರ್ಯದರ್ಶಿ ವಿಶ್ವಾಸ್ ಗೌಡ ಕಾಯರ್ತಡ್ಕ, ಜೊತೆ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಲಾಯಿ, ಪ್ರಮುಖರಾದ ಪ್ರತೀಕ್ಷ್ ರೈ ಕೊಣಾಲುಗುತ್ತು, ಲಿಂಗಪ್ಪ ಗೌಡ ದರ್ಖಾಸು, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ರಮೇಶ್ ಗೌಡ ಕಾರ್ಯತ್ತಡ್ಕ, ತಾರನಾಥ ಎಣ್ಣೆತ್ತೋಡಿ, ಜತ್ತಪ್ಪ ಗೌಡ ಎಂ.ಪಿ.ಮಣ್ಣಮಜಲು, ಅಣ್ಣಿ ಗೌಡ ಮಣ್ಣಮಜಲು, ಸದಾನಂದ ಗೌಡ ಮಣ್ಣಮಜಲು, ಬಾಲಕೃಷ್ಣ ರೈ ತೋಟ, ತ್ಯಾಂಪಣ್ಣ ದೇವಾಡಿಗ ಗಾಣದಕೊಟ್ಟಿಗೆ, ವಿಶ್ವನಾಥ ಪೂಜಾರಿ ಕುರುಂಬೊಟ್ಟು, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಮೋನಪ್ಪ ಗೌಡ ಎಣ್ಣೆತ್ತೋಡಿ, ಸಂತೋಷ್ ಪೂಜಾರಿ ಕಲಾಯಿ, ಸುಂದರ ಗೌಡ ಆರ್ಲ, ಸತೀಶ್ ರೈ ತೋಟ, ಪ್ರವೀಣ್ ದೇವಾಡಿಗ ಗಾಣದಕೊಟ್ಟಿಗೆ, ಗಣೇಶ್ ಪೂಜಾರಿ ಪಾಂಡಿಬೆಟ್ಟು, ರತ್ನಾಕರ ಗೌಡ ಕಾಯರ್ತಡ್ಕ, ನೋಣಯ್ಯ ಶೆಟ್ಟಿ ಮರಂದೆ ಮತ್ತಿತರರು ಉಪಸ್ಥಿತರಿದ್ದರು.