ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಕುನ್ನತ್ ನಿವಾಸಿ ಕೆ.ವಿ.ಪತ್ರೋಸ್(73ವ.)ರವರು ವಯೋ ಸಹಜ ಅನಾರೋಗ್ಯದಿಂದ ಎ.7ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆ.ವಿ.ಪತ್ರೋಸ್ರವರು ಪ್ರಗತಿಪರ ಕೃಷಿಕರಾಗಿದ್ದರು. ಇವರ ಪತ್ನಿ 1 ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರು ಪುತ್ರರಾದ ರಂಜನ್, ಮನೋಜ್, ಪುತ್ರಿ ರೀಟಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
