ಪುತ್ತೂರು: ನೆಲ್ಯಾಡಿ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಂತಿ ಎಸ್.ರವರು ಎ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಸಾಮೆಹೊಲದಲ್ಲಿ ಜನಿಸಿದ ಜಯಂತಿ ಎಸ್.ರವರು ಪಿಯುಸಿ ಶಿಕ್ಷಣ ಪೂರೈಸಿ 1986ರಲ್ಲಿ ಪುತ್ತೂರು ತಾಲೂಕಿನ ಗೋಳಿದಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡರು. 1988ರಿಂದ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡು ಇದೇ ಅವಧಿಯಲ್ಲಿ ಶಿಕ್ಷಕರ ತರಬೇತಿ(ಟಿಸಿಎಚ್) ಪಡೆದು 2000ದಲ್ಲಿ ಪುಚ್ಚೇರಿ ಶಾಲೆಗೆ ವರ್ಗಾವಣೆಗೊಂಡರು. ಹತ್ತು ವರ್ಷ ಸೇವೆ ಸಲ್ಲಿಸಿದ ಇವರು ಬಳಿಕ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡು ಒಟ್ಟು 39 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಇವರು ನೆಲ್ಯಾಡಿ ಜೇಸಿರೇಟ್ನ ಮಾಜಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಬರೆಗುಡ್ಡೆ ’ವಾತ್ಸಲ್ಯ’ದಲ್ಲಿ ಪತಿ ನಿವೃತ್ತ ಹಿರಿಯ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ, ಪುತ್ರ ಬ್ಯಾಂಕ್ ಉದ್ಯೋಗಿ ವಂದನ್ ಕುಮಾರ್, ಸೊಸೆ ಗೃಹಿಣಿ ಜ್ಯೋತಿ, ಮೊಮ್ಮಗ ರುಧಾನ್ಸ್ ವಿ. ನಾಯ್ಕ್ರವರೊಂದಿಗೆ ವಾಸ ಮಾಡುತ್ತಿದ್ದಾರೆ.