ಪುತ್ತೂರು: ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಮೇ.29 ರಂದು 2025-26ನೇ ನೂತನ ಶೈಕ್ಷಣಿಕ ವರ್ಷದ ಪ್ರಾರೊಂಭೋತ್ಸವ ಕಾರ್ಯಕ್ರಮ ನಡೆಯಿತು.ನೂತನ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿದ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮಾತನಾಡಿ, ಶಿಕ್ಷಣವು ಶಿಸ್ತಿನಿಂದ ಕೂಡಿದ್ದರೆ ಅದು ವಿದ್ಯಾರ್ಥಿಯನ್ನು ಶಕ್ತಿಯನ್ನಾಗಿ ರೂಪಿಸುತ್ತದೆ ಎಂದು ನುಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಶಿಕ್ಷಣವೆಂದರೆ ಜ್ಞಾನಾರ್ಜನೆ ಈ ಜ್ಞಾನದಿಂದ ಧೀಶಕ್ತಿ ಇದುವೇ ಸುಖ ಜೀವಿತಕ್ಕೆ ಠೇವಣಿ ಎಂದು ನುಡಿದು ಶುಭಹಾರೈಸಿದರು.
ಮುಖ್ಯಶಿಕ್ಷಕಿ ಶೋಭನಾಗರಾಜ್ ನೂತನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆಯನ್ನು ಮಾಡುವಂತೆ ಹಿತನುಡಿಗಳನ್ನಾಡಿ ಶುಭಹಾರೈಸಿದರು. ಕೋಶಾಧಿಕಾರಿ ರೊ.ಆಸ್ಕರ್ ಆನಂದರವರು, ಶಾಲಾ ಆಡಳಿತಧಿಕಾರಿ ಸುಶಾಂತ್ ಹಾರ್ವಿನ್ರವರು ಶುಭಹಾರೈಸಿದರು. ಉಪ ಮುಖ್ಯಶಿಕ್ಷಕಿ ಲವೀನಾ ಹನ್ಸ್, ಸಂಯೋಜಕರಾದ ಪ್ರತಿಮಾ ಎನ್ ಜಿ, ಅಮೃತವಾಣಿ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶಾಲೆಯ ಕೀ ಬೋರ್ಡ್ ತರಗತಿಯ ವಿದ್ಯಾರ್ಥಿಗಳಾದ ಶ್ರೀವಿಭಾ, ಅಕ್ಷರ ಕೆ ಸಿ, ಸೃಷ್ಟಿ, ಶಮಿತಾ, ಕ್ಷಮಾರವರಿಂದ ಪರಿಸರ ಗೀತೆಗಳ ರಸಮಂಜರಿಯು ನಡೆಯಿತು. ವಿದ್ಯಾರ್ಥಿನಿ ಲೆನೋರಾ ಸಾನ್ಸಿಯಾ ಪಿಂಟೊ ಮತ್ತು ಸಮೃದ್ಧಿ ಕಾರ್ಯಕ್ರಮವನ್ನು ನಿರೂಪಿಸಿದರು.ಕಲಾ ಶಿಕ್ಷಕರಾದ ಸದಾಶಿವ ಭಟ್ ನಿರ್ಮಿಸಿದ ಚಂದ್ರಲೋಕವನ್ನು ಪ್ರತಿನಿಧಿಸುವ ಸುಂದರ ವೇದಿಕೆ ಮತ್ತು ಕುಣಿತ ಬೊಂಬೆಗಳ ಸ್ವಾಗತವು ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿಸಿದವು.