ಪುತ್ತೂರು: ಸಂಘಟನೆಗೆ ಶಕ್ತಿ ಸದಸ್ಯತ್ವದಲ್ಲಿದೆ. ಅದಕ್ಕೆ ಹಾಲು ಜೇನು, ತುಪ್ಪು ಸೇರಿದರೆ ಇನ್ನೆಷ್ಟು ಉತ್ತಮವಾಗುತ್ತದೆ. ಆದರೆ ಹಾಲಿಗೆ ಹುಳಿಹಿಂಡಿದರೆ ಎನಾಗಬಹುದು ಎಂಬುದನ್ನು ಚಿಂತಿಸಿ. ಹಾಗಾಗಿ ಹಾಲಿಗೆ ಹುಳಿ ಹಿಂಡುವವರು ಬೇಡ ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಹೇಳಿದ್ದಾರೆ.
ಪುತ್ತೂರು ಒಕ್ಕಲಿಗ ಗೌಡ ಸಮುದಸಯ ಭವನದಲ್ಲಿ ಜೂ.1ರಂದು ನಡೆದ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಥಮ ಮಹಾಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಮುದಾಯಕ್ಕೆ ಆದಿ ಚುಂಚನಗಿರಿ ಮಠವಿದೆ. ಅದಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಅದೇ ರೀತಿ ನಮಗೆ ಗುರುಪೀಠ ಶೃಂಗೇರಿ. ಹಾಗಾಗಿ ನಾವು ಹಿರಿಯ ಸಂಪ್ರದಾಯ ಮುಂದುವರಿಸಬೇಕು ಎಂದರು.