ಪುತ್ತೂರು: ಸಮಸ್ತ ವಿದ್ಯಾಭ್ಯಾಸ ಮಂಡಳಿ ಅಧೀನದಲ್ಲಿ ಕಾರ್ಯಾಚರಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 530 ಮದ್ರಸಗಳಲ್ಲಿ ಸೇವೆಗೈಯುತ್ತಿರುವ ಮದ್ರಸ ಅಧ್ಯಾಪಕರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮಾಣಿ ಸಮೀಪದ ಬುಡೋಳಿ ಸಮಸ್ತ ಮುಅಲ್ಲಿಂ ಸೆಂಟರ್ನಲ್ಲಿ ನಡೆಯಿತು.

ಸಮಸ್ತ ಮುಫತ್ತಿಶ್ ಹನೀಫ್ ಮುಸ್ಲಿಯಾರ್ ಬೋಳಂತೂರು ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಸಭೆ ಉದ್ಘಾಟಿಸಿದರು. ಹಸನ್ ಬಾಖವಿ ಕಿರಾಅತ್ ಪಠಿಸಿದರು.
ಪ್ರ.ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ವಾರ್ಷಿಕ ವರದಿ ಮತ್ತು ಆಯವ್ಯಯ ಮಂಡಿಸಿದರು. ಶಂಸುದ್ದೀನ್ ದಾರಿಮಿ ಹಾಗೂ ಮುಹಮ್ಮದ್ ಅಶ್ರಫ್ ಫೈಝಿ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಶರೀಫ್ ಮದನಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಮದನಿ ವಂದಿಸಿದರು.
ಸಮಿತಿ ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ದಾರಿಮಿ ಪಮ್ಮಲೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ನವವಿ ಮುಂಡೋಳೆ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ಇಬ್ರಾಹಿಂ ದಾರಿಮಿ ಕಡಬ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಹಾಗೂ ಮುಹಮ್ಮದ್ ಅಶ್ರಫ್ ಫೈಝಿ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಮದನಿ ಸಜಿಪ ಮತ್ತು ಅಬ್ದುಲ್ ರಝಾಕ್ ಮದನಿ ಸುರತ್ಕಲ್, ಪರೀಕ್ಷಾ ಬೋರ್ಡ್ ಉಸ್ತುವಾರಿಯಾಗಿ ಸಿ ಎಚ್ ಇಬ್ರಾಹಿಂ ಮುಸ್ಲಿಯಾರ್, ಎಸ್ಕೆಎಸ್ಬಿವಿ ಚೇರ್ಮನ್ ಆಗಿ ಯಹ್ಯಾ ಮದನಿ ಬಾಂಬಿಲ, ಕನ್ವೀನರ್ ಆಗಿ ಕಲಂದರ್ ಹನೀಫ್ ದಾರಿಮಿ, ಮಂಗಳೂರು, ರಿಲೀಫ್ ಸೆಲ್ ಚೇರ್ಮನ್ ಆಗಿ ಅಬ್ದುಲ್ ಮಜೀದ್ ದಾರಿಮಿ ಮಾಣಿ, ಕನ್ವೀನರ್ ಆಗಿ ಫಳ್ಲುರ್ರಹ್ಮಾನ್ ಮುಸ್ಲಿಯಾರ್, ಮಂಗಳೂರು ವೆಸ್ಟ್ ಕುರುನ್ನುಗಳ್ ಉಸ್ತುವಾರಿಯಾಗಿ ಬಶೀರ್ ದಾರಿಮಿ ಪುತ್ತೂರು, ಆಫೀಸ್ ಸೆಕ್ರೆಟರಿಯಾಗಿ ತಮೀಮ್ ಅನ್ಸಾರಿ ಬುಡೋಳಿ ಆಯ್ಕೆಯಾದರು.