ಪುತ್ತೂರು: ನಿಡ್ಪಳ್ಳಿ ಎಂಪೆಕಲ್ಲು ನೂರುಲ್ ಹುದಾ ಮದ್ರಸ ಎಸ್ಕೆಎಸ್ಬಿವಿ ರಚನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಮದ್ರಸದ ಹಳೆ ವಿದ್ಯಾರ್ಥಿ ಪ್ರಸ್ತುತ ಬಪ್ಪಳಿಗೆ ದರ್ಸ್ ವಿದ್ಯಾರ್ಥಿ ಬಾಸಿಲ್ ಎಂಪೆಕಲ್ಲು ಖುರ್ಆನ್ ಪಾರಾಯಣ ಮಾಡಿದರು. ಆ ವಿದ್ಯಾರ್ಥಿಯನ್ನು ಸ್ಥಳೀಯ ಎಸ್ಕೆಎಸ್ಬಿವಿ ವಿದ್ಯಾರ್ಥಿಗಳು ಸನ್ಮಾನಿಸಿದರು. ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಜೊತೆ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ವೀರಮಂಗಲ ವಿಷಯ ಮಂಡಿಸಿದರು.
ನಂತರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಹಫೀಝ್ ವೈಎಂಕೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಿಫಾನ್ ಎಂಪೆಕಲ್ಲು, ಕೋಶಾಧಿಕಾರಿಯಾಗಿ ಮುಹಮ್ಮದ್ ಸಫ್ರಾನ್ ಕುಕ್ಕುಪುಣಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಫಾಯಿಝ್ ಎಂಪೆಕಲ್ಲು, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಹಮ್ಮದ್ ಶಹೀರ್ ಕುಕ್ಕುಪುಣಿ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸವಾದ್ ಕುಕ್ಕುಪುಣಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹ್ಮದ್ ಮಿಸ್ಬಾಹ್, ಉಸ್ಮಾನ್ ಶಾಝಿಲ್, ಮುಹಮ್ಮದ್ ಶಾಝ್, ಮುಹಮ್ಮದ್ ಹಾಫಿಲ್, ಅಬ್ದುಲ್ ಸಮದ್, ಅಹ್ಮದ್ ವಾಹಿದ್, ಮುಹಮ್ಮದ್ ಫಿಝಾನ್ ಆಯ್ಕೆಗೊಂಡರು. ಸ್ಥಳೀಯ ತ್ವಾಹಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕುಕ್ಕುಪುಣಿ, ಕೋಶಾಧಿಕಾರಿ ಅಬ್ದುಲ್ಲಾ ಹಾಗೂ ಜಮಾಅತ್ ಸದಸ್ಯರಾದ ಹಮೀದ್ ಮೊದಲಾದವರು ಶುಭ ಹಾರೈಸಿದರು. ಸ್ಥಳೀಯ ಸದರ್ ಉಸ್ತಾದ್ ಸ್ವಾದಿಕ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.
